ತಿರುಮಲ ದೇವಸ್ಥಾನದ ಆಡಳಿತದ ನಿಯಂತ್ರಣಕ್ಕೆ ಕೇಂದ್ರ ಪ್ರಯತ್ನ - ಸಿಎಂ ಚಂದ್ರಬಾಬು ನಾಯ್ಡು

ಶುಕ್ರವಾರ, 8 ಜೂನ್ 2018 (15:24 IST)
ಚಿತ್ತೂರು : ತಿರುಮಲ ದೇವಸ್ಥಾನದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಆರೋಪ ಮಾಡಿದ್ದಾರೆ.


ಗುರುವಾರ ಚಿತ್ತೂರಿನಲ್ಲಿ ನವ ನಿರ್ಮಾಣ ದೀಕ್ಷಾ ಸಮಾವೇಶದ ಆರನೇ ದಿನದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು,’ ತಿರುಮಲ ದೇವಸ್ಥಾನದ ವಿರುದ್ಧದ ಯಾವುದೇ ಸಂಚನ್ನು ಸಫಲಗೊಳ್ಳಲು ನಾವು ಬಿಡುವುದಿಲ್ಲ. ದೇವಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕೇಂದ್ರ ಪ್ರಯತ್ನಿಸಿತ್ತು. ಅಂತಹ ಪಿತೂರಿಗಳು ಈಡೇರುವುದಿಲ್ಲ. 2003ರಲ್ಲಿ ನಾನು ಭಯೋತ್ಪಾದಕರ ದಾಳಿಯಿಂದ ಬಚಾವಾಗಲು ಬಾಲಾಜಿಯ ಆಶೀರ್ವಾದವೇ ಕಾರಣ. ಬಾಲಾಜಿ ದೇವರ ದೇವಸ್ಥಾನದ ಪಾವಿತ್ರ್ಯವನ್ನು ಹಾಳುಮಾಡಲು ನಾನು ಅವಕಾಶ ನೀಡುವುದಿಲ್ಲ' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ