ಸಿಎಂ ಸಿದ್ದರಾಮಯ್ಯ ಅವರ ನೇತೃತ್ವ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ಸಚಿವರಿಂದ ಕಿತ್ತಾಟ

ಸೋಮವಾರ, 19 ಮಾರ್ಚ್ 2018 (15:08 IST)
ಬೆಂಗಳೂರು : ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರಕ್ಕೆ ಸಂಬಂಧಿಸಿದ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ಸಚಿವರ ಕಿತ್ತಾಟ ಶುರುವಾಗಿದೆ.


ಎಂ.ಬಿ. ಪಾಟೇಲ್ ಅವರ ಮಾತಿಗೆ ಗರಂ ಆದ  ಎಸ್.ಎಸ್.ಮಲ್ಲಿಕಾರ್ಜುನ್ ಅವರು,’ ಅನಗತ್ಯವಾಗಿ ಸಮುದಾಯವನ್ನು ಹಾಳ್ ಮಾಡ್ತಾ ಇದ್ದೀರಿ. ನಿಮ್ಮ ಇಬ್ಬರಿಂದಾನೆ ಏನೋ ಮಾಡೋಕೆ ಹೋಗಿ ಏನೋ ಆಗಿದೆ. ಸ್ವತಂತ್ರ ಧರ್ಮಕ್ಕೆ ಮಹಾಸಭಾ ಮನವಿ ಕೊಟ್ಟಿತ್ತು. ಈಗ ಲಿಂಗಾಯುತ ಸ್ವತಂತ್ರ ಧರ್ಮ ಅಂತ ಹುಲ್ಲೆಬ್ಬಿಸುತ್ತಿದ್ದೀರಾ? ಎಂದ ಹೇಳಿದ್ದಾರೆ. ಮಲ್ಲಿಕಾರ್ಜುನ್ ಅವರ ಮಾತಿಗೆ ಸಿಎಂ ಎದುರೇ ವಿನಯ್ ಕುಲಕರ್ಣಿ  ಅವರು,’ನೀವ್ ಹೊರಗೆ ಏನ್ ಮಾತಾಡಿ ಬಂದ್ರಿ ಅಂತಾ ಗೊತ್ತಿದೆ. ಹಾಳ್ ಮಾಡ್ತಿರೋದು ನಾವಲ್ಲ ನೀವು ಎಂದು   ತಿರುಗೇಟು ನೀಡಿದ್ದಾರೆ. ನಂತರ ಮಾತನಾಡಿದ ಎಂಬಿ.ಪಾಟೇಲ್ ಅವರು ,’ನಾನು ಹೇಳೋದು ಮೊದಲು ಕೇಳ್ರಿ. ಆಮೇಲೆ ನೀವು ಏನು ಹೇಳ್ತೀರೋ ಹೇಳ್ರಿ. ಎಲ್ಲ ಕೇಳಿ ಆದ್ಮೇಲೆ ಸಿಎಂ ಏನ್ ನಿರ್ಧಾರ ಮಾಡ್ತಾರೋ ಮಾಡಲಿ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ