ರಾಕಿಂಗ್ ಸ್ಟಾರ್ ಚುನಾವಣಾ ಪ್ರಚಾರ ಮಾಡಿದ್ದು ಯಾರ ಪರವಾಗಿ ಗೊತ್ತಾ...?

ಗುರುವಾರ, 3 ಮೇ 2018 (06:23 IST)
ಮೈಸೂರು : ರಾಜ್ಯ ಸಭಾ ಚುನಾವಣಾ ಹಿನ್ನಲೆಯಲ್ಲಿ ಇದೀಗ ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಕೆಆರ್ ನಗರದ ಜೆಡಿಎಸ್ ಅಭ್ಯರ್ಥಿ ಸಾ ರಾ ಮಹೇಶ್ ಅವರ ಪರವಾಗಿ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ.


ಕೆ.ಆರ್ ನಗರದ ತೋಪಮ್ಮ ದೇವಿಗೆ ಪೂಜೆ ಸಲ್ಲಿಸಿದ ಯಶ್ ಅವರು ನಗರದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿದರು. ಯಶ್ ಬಂದಿದ್ದಾರೆ ಎನ್ನುವ ವಿಚಾರ ತಿಳದು ರಾಕಿಂಗ್ ಸ್ಟಾರ್ ಅವರನ್ನು ನೋಡಲು ಜನ ಮುಗಿಬಿದ್ದರು.


‘ನಾನು ಜನರಿಂದ ಸ್ಟಾರ್ ಆಗಿದ್ದೇನೆ. ಈ 5 ವರ್ಷ ಜನಗಳ ಜೀವನ ಈ 10 ದಿನದ ಕೆಲಸಗಳಿಂದ ನಿರ್ಧಾರ ಆಗುತ್ತದೆ. ಈ ಕೆಲಸದಲ್ಲಿ ನನ್ನ ಕರ್ತವ್ಯ ಕೂಡ ಇದೆ. ಹಾಗಾಗಿ ನನಗೆ ನಂಬಿಕೆ ಇರುವವರು, ನನ್ನ ಸ್ನೇಹಿತರು, ನನ್ನ ಒಡನಾಟದಲ್ಲಿ ಇರುವವರನ್ನು ಬೆಂಬಲಿಸುತ್ತಿದ್ದೇನೆ. ನನಗೆ ಸಾಕಷ್ಟು ಮಂದಿ ಪ್ರಚಾರಕ್ಕೆ ಕೇಳಿಕೊಂಡರು. ಆದರೆ ಯಾರೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೋ, ಗುರಿಯನ್ನು ಇಟ್ಟುಕೊಳ್ಳುತ್ತಾರೋ ಅವರನ್ನು ನಾನು ಬೆಂಬಲಿಸುತ್ತೇನೆ. ಯಾವುದೇ ಪಕ್ಷ, ಯಾವುದೇ ಸಿದ್ಧಾಂತಕ್ಕೆ ನಾನು ಬೆಲೆ ಕೊಡಲ್ಲ. ನನಗೆ ಸಾರಾ ಮಹೇಶ್ ಎಂದರೆ ಬಹಳ ಪ್ರೀತಿ. ಅವರು ಮಾತಿಗೆ ನಿಲ್ಲೋ ವ್ಯಕ್ತಿ. ನಾವು ಬಹಳ ವರ್ಷದಿಂದ ಸ್ನೇಹಿತರು. ಅಲ್ಲದೇ ನನಗೆ ಹಳ್ಳಿಗಳೆಂದರೆ ಸಾಕಷ್ಟು ಇಷ್ಟ. ಹೀಗಾಗಿ ನಾನು ತುಂಬಾ ಇಷ್ಟಪಡೋ ಸಾರಾ ಮಹೇಶ್‍ಗೆ ಬೆಂಬಲಿಸುತ್ತಿದ್ದೇನೆ. ಜನರು ನನ್ನನ್ನು ಬೆಂಬಲಿಸುತ್ತಾರೆ. ಮುಂದೆ ಅವರು ಅಧಿಕಾರಕ್ಕೆ ಬಂದಾಗ ನಾನು ಅವರ ಕೈಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಸುತ್ತೇನೆ. ಅದು ನನ್ನ ಜವಾಬ್ದಾರಿ. ನಾನು ಎರಡೂ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೀನಿ ಎಂದು ಜನಗಳು ಕನ್ಫ್ಯೂಸ್ ಆಗುವುದು ಬೇಡ. ಯವಕರು ಜನಪರ ಕಾಳಜಿ ಹಾಗೂ ಕೆಲಸ ಮಾಡೋ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಯಾರೂ ಆ ಕ್ಷೇತ್ರದಲ್ಲಿ ಇರುತ್ತಾರೆ. ಯಾರು ಕೆಲಸ ಮಾಡುವವರು ಎಂದು ಅವರಿಗೆ ಅನಿಸುತ್ತದ್ದೆಯೋ ಆ ಅಭ್ಯರ್ಥಿಗೆ ಅವರು ವೋಟ್ ಮಾಡಲಿ’ ಎಂದು ಯಶ್ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ