ಹೆಚ್. ವೈ. ಮೇಟಿ ರಾಸಲೀಲೆ ಸಂತ್ರಸ್ತೆ ವಿಜಯಲಕ್ಷ್ಮಿ ಸರೂರು ಚುನಾವಣಾ ಅಖಾಡಕ್ಕೆ

ಶುಕ್ರವಾರ, 6 ಏಪ್ರಿಲ್ 2018 (18:29 IST)
ಹೆಚ್. ವೈ. ಮೇಟಿ ರಾಸಲೀಲೆ ಸಂತ್ರಸ್ತೆ ವಿಜಯಲಕ್ಷ್ಮಿ ಸರೂರು ಚುನಾವಣಾ ಅಖಾಡಕ್ಕೆ ಸಿದ್ದರಾಗಿದ್ದಾರೆ. 
ಬಾಗಲಕೋಟೆ ಕ್ಷೇತ್ರದಲ್ಲಿ ಹೆಚ್.ವೈ. ಮೇಟಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ. ಪಕ್ಷೇತರವಾಗಿ ಚುನಾವಣೆಗೆ ನಿಲ್ಲೋಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಸರಿಯೋದಿಲ್ಲ ಯಾವುದೇ ಆಸೆ ಆಮಿಷಗಳಿಗೂ ಮಣಿಯೋದಿಲ್ಲ ಸ್ಪರ್ಧೆ ಖಚಿತ ಎಂದಿರೋ ವಿಜಯಲಕ್ಷ್ಮಿ ಸರೂರ,ನಾನು ಸಾಕಷ್ಟು ನೊಂದಿದ್ದೇನೆ  ನನ್ನಂತೆ ನೊಂದ ಮಹಿಳೆಯರ ಪರ ಕೆಲಸ ಮಾಡುತ್ತೇನೆ , ಜನರಿಂದಲೇ ಸಹಾಯ ಕೇಳಿ ಕಾಲುಬಿದ್ದು ಮತ ಕೇಳುತ್ತೇನೆ ಎಂದು ಸಂತ್ರಸ್ತೆ ವಿಜಯಲಕ್ಷ್ಮಿ ಸರೂರು ತಿಳಿಸಿದ್ದಾಳೆ.
 
ಬಾಗಲಕೋಟೆ ಮತಕ್ಷೇತ್ರದಿಂದ ಸ್ಪರ್ಧೆಗೆ ಮುಂದಾದ ವಿಜಯಲಕ್ಷ್ಮಿ ಸರೂರ ಹೆಚ್. ವೈ. ಮೇಟಿಗೆ ಟಾಂಗ್ ಕೊಡಲು ಸಿದ್ದರಾಗಿದ್ದಾರೆ.ಹೆಚ್ ವೈ ಮೇಟಿ‌ ಮತ್ತು ವಿಜಯಲಕ್ಷ್ಮಿ ಸರೂರ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಮ್ಮ ಸಮುದಾಯದ ಜನತೆ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ಇದೆ ಅಂತಿದ್ದಾಳೆ ಸಂತ್ರಸ್ತೆ. 
 
ಇನ್ನು ಮೇಟಿ ಹಣಿಯಲು ಇತರೆ ಪ್ರಭಲ ಪಕ್ಷದವರು ವಿಜಯಲಕ್ಷ್ಮಿ ಸರೂರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗುತ್ತಿದೆ. ಇನ್ನು ವಿಜಯಲಕ್ಷ್ಮಿ ಸರೂರ ಗೆ ಎಮ್ ಇ ಪಿ ಪಕ್ಷದಿಂದ ಆಫರ್ ಬಂದಿದೆಯಂತೆ.ಆದರೆ ನಾನು ಸದ್ಯಕ್ಕೆ ನಿರ್ಧಾರ ಕೈಗೊಂಡಿಲ್ಲ ಪಕ್ಷೇತರ ಸ್ಪರ್ಧೆ ವಿಚಾರ  ಮಾತ್ರ ಇದೆ, ಮೇಟಿಯವರನ್ನು ಸೋಲಿಸೋದೆ ನನ್ನ ಗುರಿ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ