ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರಿ ಮಳೆ

ಸೋಮವಾರ, 26 ಜೂನ್ 2023 (12:05 IST)
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 30ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ,ಯಾದಗಿರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಮಂಡ್ಯ, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಕುಂದಾಪುರ, ಕೋಟ, ಮಂಕಿ, ಸಿದ್ದಾಪುರ, ಹೊನ್ನಾವರ, ಶಿರಾಲಿ, ಗೇರುಸೊಪ್ಪ, ಅಂಕೋಲಾ, ಕಾರ್ಕಳದಲ್ಲಿ ಭಾರಿ ಮಳೆಯಾಗಿದೆ. ಕುಮಟಾ, ಕಾರವಾರ, ಗೋಕರ್ಣ, ಜೇವರ್ಗಿ, ಕದ್ರಾ, ಕ್ಯಾಸಲ್ ರಾಕ್, ಚಿಂಚೋಳಿ, ಚಿತ್ತಾಪುರ, ಕೊಲ್ಲೂರು, ಪಣಂಬೂರು, ಕಮಲಾಪುರ, ಲಿಂಗನಮಕ್ಕಿ, ಮಂಗಳೂರ ವಿಮಾನ ನಿಲ್ದಾಣ, ಬನವಾಸಿ, ನಾರಾಯಣಪುರ, ಕಮ್ಮರಡಿ, ಮಾಣಿ, ಮಂಗಳೂರು, ಬೆಳ್ತಂಗಡಿ, ಪುತ್ತೂರು, ಸಿಂದಗಿ, ಸೇಡಂ, ಸೈದಾಪುರ, ಕಳಸ, ಶೃಂಗೇರಿ, ಮುಲ್ಕಿ, ಉಪ್ಪಿನಂಗಡಿ, ಸುಳ್ಯ, ಧರ್ಮಸ್ಥಳ, ಮುಂಡಗೋಡ, ಸವಣೂರು, ಬೀದರ್, ಮುದಗಲ್, ಭಾಲ್ಕಿ, ಬಸವನಬಾಗೇವಾಡಿ, ಇಂಡಿ, ಕಲಘಟಗಿ, ಖಜೂರಿ, ಲೋಕಾಪುರ, ಹುಂಚದಕಟ್ಟೆ, ಆನವಟ್ಟಿ, ತ್ಯಾಗರ್ತಿ, ಕೊಪ್ಪ. ಕೊಟ್ಟಿಗೆಹಾರ, ಜಯಪುರ, ಹರಪನಹಳ್ಳಿ, ಭಾಗಮಂಡಲದಲ್ಲಿ ಮಳೆಯಾಗಿದೆ.

ಕರಾವಳಿಯ ಬಹುತೇಕ ಕಡೆಗಳಲ್ಲಿ, ಉತ್ತರ ಒಳನಾಡಿನ ಹಲು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ