ಜೆಡಿಎಸ್ ಕಾರ್ಯಕರ್ತನ ಹತ್ಯೆಗೆ ಜನತೆ ತಕ್ಕ ಪಾಠ: ದೇವೇಗೌಡ

ಶನಿವಾರ, 28 ಏಪ್ರಿಲ್ 2018 (13:30 IST)
ಹಾಸನ: ಗೌರಿಬಿದನೂರುನಲ್ಲಿ ಹೇಯ ಕೃತ್ಯ ನಡೆದಿದೆ. ನಮ್ಮ ಕಾರ್ಯಕರ್ತನ ಕೊಲೆಯಾಗಿದೆ. ಬೆಳಿಗ್ಗೆ ಹುಣಸೂರು, ಭಟ್ಕಳಕ್ಕೆ ಹೋಗುತ್ತೇನೆ. ರಾಜ್ಯದ ನಲವತ್ತು ಕಡೆ ಹೋಗುತ್ತೇನೆ. ಜಿಲ್ಲೆಯ ವಿದ್ಯಮಾನಕ್ಕೆ ಜನರೇ ಔಷದಿ ಕೊಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನಮ್ಮ ನಾಯಕರೆಲ್ಲಾ ಕಣದಲ್ಲಿದ್ದಾರೆ. ನಾಲ್ಕು ಸಭೆಗೆ ಮಾಯಾವತಿ ಬರುತ್ತಾರೆ. ಚಂದ್ರಶೇಖರ್, ಚಂದ್ರ ಬಾಬು ನಾಯ್ಡು , ಒವೈಸಿ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ.ಕೊನೆಯ ಎರೆಡು ದಿನ ಹಾಸನದಲ್ಲಿ ಇರುತ್ತೇನೆ ಎಂದು ತಿಳಿಸಿದ್ದಾರೆ.
 
ಲೊಕಾಯುಕ್ತ ನಾಶ ಕಾಂಗ್ರೆಸ್ ನಿಂದ ಆಗಿದೆ. ಇಂತಹ ಪ್ರಣಾಳಿಕೆ ಬೇಕಾ ಎಂದು ಪ್ರಶ್ನಿಸಿದರು. ಮೋದಿ ಪ್ರಭಾವ ಜನರೇ ತೀರ್ಮಾನಿಸುತ್ತಾರೆ.  ರಾಷ್ಟ್ರೀಯ ಪಕ್ಷಗಳು ಸ್ಥಳೀಯ ಪಕ್ಷಗಳನ್ನು ಹಾಳು ಮಾಡುತ್ತಿವೆ. ಇನ್ನೆರಡು ದಿನದಲ್ಲಿ ನಮ್ಮ ಪ್ರಣಾಳಿಕೆ ಬಿಡುಗಡೆಯಾಗುತ್ತದೆ ಎಂದು ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ