ರಾಮನಗರ: ನೀತಿ ಸಂಹಿತೆಯಿಂದಾಗಿ ಜೆಡಿಎಸ್ ಸಭೆ ರದ್ದು

ಬುಧವಾರ, 28 ಮಾರ್ಚ್ 2018 (19:07 IST)
ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಪರವಾನಗಿ ಪಡೆಯದೆ ಸಭೆ ನಡೆಸಲು ಮುಂದಾದ ಜೆಡಿಎಸ್ ಸಭೆ ರದ್ದು ಮಾಡಲಾಗಿದೆ.
ಚನ್ನಪಟ್ಟಣದ ಪಕ್ಷದ ಕಚೇರಿ ಪಕ್ಕದಲ್ಲೆ ಶಾಮಿಯಾನ ಹಾಕಿ ಕಾರ್ಯಕರ್ತರ ಸಭೆ ನಡೆಸಲು ಜೆಡಿಎಸ್ ಮುಖಂಡರು ಮುಂದಾಗಿದ್ದರು. ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕಿತ್ತು. ಆದರೆ ಸ್ಥಳಕ್ಕೆ ಬಂದ ಅಧಿಕಾರಿಗಳು ಸಭೆಗೆ ಅನುಮತಿ ಇಲ್ಲ. ಸಭೆ ನಡೆಸದಂತೆ ತಾಕೀತು ಮಾಡಿದರು. 
 
ಹೀಗಾಗಿ  ಸಭೆಗೆ ಹಾಕಿದ್ದ ಶಾಮಿಯಾನವನ್ನು ಎಮ್ ಸಿಸಿ  ಅಧಿಕಾರಿಗಳು ಬಿಚ್ಚಿಸಿದರು. ಸ್ವತಃ ಜೆಡಿಎಸ್ ಕಾರ್ಯಕರ್ತರೆ ಶಾಮಿಯಾನ ಬಿಚ್ಚಿದ ಪ್ರಸಂಗ ಕೂಡ ನಡೆಯಿತು. ನಗರಸಭೆ ಪೌರಾಯುಕ್ತ ಆನಂದ್ ಹಾಗೂ ನಗರ ಠಾಣೆ ಪಿಎಸ್ ಐ ಚೈತನ್ಯ ಕುಮಾರ್ ನೇತೃತ್ವದ ತಂಡದಿಂದ ಸಭೆ ರದ್ದುಗೊಳಿಸುವ ಪ್ರಕ್ರಿಯೆ ನಡೆಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ