ಈ ಮೂವರಿಂದಾಗಿಯೇ ಕೇರಳ, ಕೊಡಗಿನಲ್ಲಿ ಪ್ರಳಯವಾಯಿತಂತೆ!
ಆಫ್ರಿಕಾದ ಮಡಗಾಂಸ್ಕರ್ ನಲ್ಲಿ ಸಂಭವಿಸಿದ ಚಂಡಮಾರುತ ‘ಸೊಮಾಲಿಯಾ ಜೆಟ್’, ಒಡಿಶಾದ ಬಂಗಾಳ ಕೊಲ್ಲಿಯ ತೀರದಲ್ಲಿ ವಾಯುಭಾರ ಕುಸಿತ ಮತ್ತು ಮುಂಗಾರು ಪ್ರವೇಶ ಜತೆಯಾಗಿ ಸಂಭವಿಸಿದ್ದರಿಂದ ಈ ರೀತಿಯಾಗಿ ಕೇರಳ, ಕೊಡಗಿನಲ್ಲಿ ಭಾರೀ ಮಳೆಗೆ ಕಾರಣವಾಯ್ತು ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
ಹಲವು ಅಂಕಿ ಅಂಶಗಳನ್ನು, ವೈಜ್ಞಾನಿಕ ಲೆಕ್ಕಾಚಾರಗಳನ್ನು ಹಾಕಿಯೇ ಹವಾಮಾನ ತಜ್ಞರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ ಇದನ್ನು ಹವಾಮಾನ ಇಲಾಖೆ ಮೊದಲೇ ಗುರುತಿಸಲು ವಿಫಲವಾಗಿ ಈ ಪ್ರಕೃತಿ ವಿಕೋಪದಿಂದ ಅನಾಹುತಗಳು ಹೆಚ್ಚಾದವು ಎನ್ನಲಾಗಿದೆ.