ಗಣೇಶ ವಿಸರ್ಜನೆ ವೇಳೆ ಘೋರ ದುರಂತ !

ಸೋಮವಾರ, 20 ಸೆಪ್ಟಂಬರ್ 2021 (09:44 IST)
ಮಧ್ಯಪ್ರದೇಶ : ಮಧ್ಯಪ್ರದೇಶದಲ್ಲಿ ಗಣೇಶ ವಿಸರ್ಜನೆಯ ದಿನದಂದು ಘೋರ ದುರಂತ ನಡೆದಿದ್ದು, ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 10 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
Photo Courtesy: Google

ಮಧ್ಯಪ್ರದೇಶದ ಭಿಂಡ್ ನಲ್ಲಿ ಗಣೇಶ ವಿಸರ್ಜನೆ ವೇಳೆ ಕೊಳದಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಮೃತ ಮಕ್ಕಳನ್ನು ಅಭಿಷೇಕ್ ಕುಶ್ವಾಹ, ಸಚಿನ್ ರಾಜಾವತ್, ಹರ್ಷಿತ್ ರಾಜಾವತ್, ಪ್ರಶಾಂತ್ ಕುಶ್ವಾಹ ಎಂದು ಗುರುತಿಸಲಾಗಿದೆ. ಎಲ್ಲರೂ 12-13 ವರ್ಷ ವಯಸ್ಸಿನವರಾಗಿದ್ದರು. ಸದ್ಯ ನಾಲ್ವರು ಮಕ್ಕಳ ಶವಗಳನ್ನು ಹೊರತೆಗೆಯಲಾಗಿದೆ. ಜೊತೆಗೆ ಮಧ್ಯಪ್ರದೇಶದ ಸಾತ್ನಾಳದಲ್ಲಿ 3 ಮಕ್ಕಳು ಸೇರಿದಂತೆ 4 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರಾಜ್ ಘರ್ ನಲ್ಲಿ ಒಂದು ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎಂದು ವರದಿಯಾಗಿದೆ.
ಸಾತ್ನಾ ಜಿಲ್ಲೆಯಲ್ಲಿ, ಜುರಾ ಗ್ರಾಮದ ಕೊಳದಲ್ಲಿ ಮುಳುಗಿ 3 ಮಕ್ಕಳು ಸೇರಿದಂತೆ 4 ಜನರು ಸತ್ತಿದ್ದಾರೆ. ಮುಳುಗುತ್ತಿದ್ದ ಎಲ್ಲಾ ಮಕ್ಕಳು 8 ರಿಂದ 10 ವರ್ಷ ವಯಸ್ಸಿನವರಾಗಿದ್ದರು. ಘಟನೆ ವರದಿಯಾಗುತ್ತಿದ್ದಂತೆ ಶಾಸಕ ನಾರಾಯಣ್ ತ್ರಿಪಾಠಿ, ಎಸ್ ಡಿಒಪಿ ಹಿಮಾಲಿ ಸೋನಿ ಮತ್ತು ಎಸ್ ಡಿಎಂ ಧೀರೇಂದ್ರ ಮಿಶ್ರಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ