ಅಪ್ಪಿತಪ್ಪಿಯೂ ಈ ಕಡೆ ಮನೆ ನಿರ್ಮಾಣ ಮಾಡಬೇಡಿ

ಗುರುವಾರ, 14 ಮಾರ್ಚ್ 2019 (07:06 IST)
ಬೆಂಗಳೂರು : ಕೆಲವರು ತುಂಬಾ ಕಷ್ಟಪಟ್ಟು ಮನೆ ನಿರ್ಮಾಣ ಮಾಡುತ್ತಾರೆ. ಅಂತವರು ಮೊದಲು ಜಾಗ ಆಯ್ಕೆ ಮಾಡುವಾಗ ವಾಸ್ತು ಶಾಸ್ತ್ರದ ಪ್ರಕಾರ ಆಯ್ಕೆ ಮಾಡಿದರೆ ಉತ್ತಮ. ಯಾಕೆಂದರೆ ಕೆಲವೊಂದು ಕಡೆ ಮನೆ ನಿರ್ಮಾಣ ಮಾಡಿದರೆ ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ.   

ಇತ್ತೀಚಿನ ದಿನಗಳಲ್ಲಿ ಶಾಂತ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿ ಶಾಂತವಾಗಿರಲು ಜನರು ಇಷ್ಟಪಡ್ತಾರೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಶಾಂತವಾಗಿರುವ ನದಿ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಬಾರದು. ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಈ ಮನೆಯಲ್ಲಿ ಎಂದೂ ಸುಖ ನೆಲೆಸಲು ಸಾಧ್ಯವಿಲ್ಲ. ಮನೆಯಲ್ಲಿ ಸದಾ ದುಃಖ ಮನೆ ಮಾಡಿರುತ್ತದೆ.

 

ಸ್ಮಶಾನದ ಭೂಮಿಯಲ್ಲಿ ಅಥವಾ ಸ್ಮಶಾನದ ಆಸುಪಾಸು ಮನೆ ನಿರ್ಮಾಣ ಮಾಡುವುದು ಒಳ್ಳೆಯದಲ್ಲ. ಮನೆಯನ್ನು ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ಹಾಗೇ ಆಸ್ಪತ್ರೆ ಸುತ್ತಮುತ್ತಲೂ ಮನೆ ನಿರ್ಮಾಣ ಮಾಡಬಾರದು. ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದಲ್ಲದೇ ಸದಾ ರೋಗಗಳು ಕಾಡುತ್ತಿರುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ