ಗೃಹಿಣಿ ರಾತ್ರಿ ಸಮಯದಲ್ಲಿ ಈ ಕೆಲಸ ಮಾಡಿದರೆ ಮನೆಗೆ ದರಿದ್ರ

ಬುಧವಾರ, 30 ಜನವರಿ 2019 (10:28 IST)
ಬೆಂಗಳೂರು : ಗೃಹಿಣಿ ಮಾಡುವ ಒಂದೊಂದು ಒಳ್ಳೆಯ ಕೆಲಸವು ಮನೆಯ ಅದೃಷ್ಟವನ್ನು ತಂದು ಕೊಡುತ್ತದೆ. ಆದ್ದರಿಂದ  ಆಕೆಯನ್ನು ಮನೆಯ ಮಹಾಲಕ್ಷ್ಮೀ ಎಂದು ಕರೆಯುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನೆಯ ಗೃಹಿಣಿ ರಾತ್ರಿ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಇದರಿಂದ ಮನೆಗೆ ದರಿದ್ರ ಆವರಿಸುತ್ತದೆ.


ಹೌದು. ಸೂರ್ಯಾಸ್ತದ ನಂತರ ಗೃಹಿಣಿಯಾದವಳು ಬೇರೆ ಮನೆಯಿಂದ ಹಾಲು, ತುಪ್ಪ, ಮೊಸರು, ಬೆಣ್ಣೆ, ಎಣ್ಣೆ ಹಾಗೂ ಈರುಳ್ಳಿಯನ್ನು ತರಬಾರದು. ಇದರಿಂದ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.


ಹಾಗೇ ಮಲಗುವ ಮೊದಲು ಮಹಿಳೆಯರು ತಲೆ ಸ್ನಾನ ಮಾಡಬಾರದು. ಹೀಗೆ ಮಾಡುವುದು ಮನೆಗೆ ಕೆಟ್ಟದಂತೆ.  ಕೊಳಕಾದ ಪಾತ್ರೆಗಳನ್ನು ರಾತ್ರಿ ತೊಳೆಯದೆ ಹಾಗೆ ಇಡಬಾರದಂತೆ. ಯಾಕೆಂದರೆ ಮನೆ ಸ್ವಚ್ಛವಾಗಿದ್ದಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಸುಖ-ಶಾಂತಿ, ಸಮೃದ್ಧಿ ನಿಮ್ಮದಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ