ಮನೆಯಲ್ಲಿನ ಅಮಂಗಳ ದೂರವಾಗಬೇಕೆ...? ಶುಕ್ರವಾರದಂದು ಈ ದೀಪ ಹಚ್ಚಿ!

ಶನಿವಾರ, 27 ಜನವರಿ 2018 (06:29 IST)
ಬೆಂಗಳೂರು : ಪ್ರತಿದಿನ ಮನೆಯಲ್ಲಿ ಪ್ರತಿಯೊಬ್ಬರು  ದೇವರಿಗೆ ದೀಪ ಹಚ್ಚೆ ಹಚ್ಚುತ್ತಾರೆ. ಅದರಲ್ಲೂ ಶುಕ್ರವಾರದಂದು ಮನೆಯಲ್ಲಿ ದೇವರಿಗೆ ವಿಶೇಷವಾಗಿ ಪೂಜೆಗಳನ್ನು ಸಲ್ಲಿಸುತ್ತಾರೆ.

 
ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ  ಎಂತಹದೇ  ದೋಷವಿದ್ದರೂ ಪರಿಹಾರ ಆಗುತ್ತದೆ. ಹಾಗೆ ಮನೆಯಲ್ಲಿ ಶುಕ್ರವಾರದಂದು ಗೃಹಿಣಿ ರೇಷ್ಮೆ ಸೀರೆಯುಟ್ಟು ದೇವರ ಮುಂದೆ ಕಲಶವೊಂದನ್ನು ಇಟ್ಟು ಅರಶಿನದಿಂದ ದೀಪ ಮಾಡಿಕೊಂಡು ಅದಕ್ಕೆ ತೆಂಗಿನೆಣ್ಣೆ ಹಾಕಿ ದೀಪ ಹಚ್ಚಿ ದೇವರಿಗೆ ಹೆಸರುಬೇಳೆ ಪಾಯಸವನ್ನು ಇಟ್ಟು ಪೂಜೆಮಾಡಿ ನಂತರ ಮನೆಯವರಿಗೆ ಹಂಚಿದರೆ ಮನೆಯಲ್ಲಿ ಯಾವುದೇ ಅಮಂಗಳಕರವಾದ ಘಟನೆಗಳು ನಡೆಯುವುದಿಲ್ಲ. ಬದಲಾಗಿ ಶಾಂತಿ, ನೆಮ್ಮದಿ, ಸಂತಸ ತುಂಬಿರುತ್ತದೆ. ಹಾಗೆ ಮನೆಯ ಯಜಮಾನನನ ಸಿಟ್ಟು, ಕೋಪ ದೂರವಾಗಿ ಆನಂದಕರವಾದ ಸಂಸಾರ ನಿಮ್ಮದಾಗುತ್ತದೆ. ಆದರೆ 15 ಶುಕ್ರವಾರ ಈ ನಿಯಮವನ್ನು ಪಾಲಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ