ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಗುರುವಾರ, 19 ಜುಲೈ 2018 (14:11 IST)
ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೧೯/೭/೧೮ ಗುರುವಾರ ಸಪ್ತಮಿ ತಿಥಿ ಮಧ್ಯಾಹ್ನ ೧.೪೦ ರ ವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಹಸ್ತ ಬೆಳಗ್ಗೆ ೭/೫೩ರ ವರೆಗೆ 

ಸೂರ್ಯೊದಯ ೬-೧೬ ಸೂರ್ಯಾಸ್ತ ೭-೧. ರಾಹುಕಾಲ. ಮದ್ಯಾಹ್ನ ೧.೩೦ರಿಂದ೩ಘಂಟೆ  ಅಷ್ಟಮಿ ಶ್ರಾದ್ದಾದಿಗಳನ್ನ ಇವತ್ತು ಮಾಡಬೇಕು ದಿನಶುದ್ದಿ ಇದೆ. ಕನ್ಯಾ ಚಂದ್ರ ರಾತ್ರಿ ೮ರ ವರೆಗೆ ಇರುವುದರಿಂದ ಪೂಜೆಗಳಿಗೆ ವೃತಕ್ಕೆ ಉತ್ತಮ. ಹೋಮ ಹವನಾದಿಗಳಿಗೆ ಅಗ್ನಿ ಇರುವುದಿಲ್ಲ. 
 
ರಾಶಿ ಫಲ
 ಮೇಷ: ಅಪಘಾತ ಭಯ, ಚಿಕ್ಕ ಪ್ರಮಾಣದಲ್ಲಿ ಅಪಘಾತ ಭಯ ಕಾಡಲಿದ್ದು ಸುರಕ್ಷತಾ ಕ್ರಮವನ್ನು ಅನುಸರಿಸುವುದು ಸೂಕ್ತ.
 
ವೃಷಭ : ಸಣ್ಣ ಪ್ರವಾಸ, ಆರ್ಥಿಕ ಅನುಕೂಲ, ಈದಿನ ಚಿಕ್ಕ ಪ್ರವಾಸ ಸಾದ್ಯತೆ ಇದ್ದು ಆರ್ಥಿಕವಾಗಿ ಉತ್ತಮದಿನವಾಗಿದೆ. 
 
ಮಿಥುನ;  ಮನೆಯಲ್ಲಿ ಶುಭಕಾರ್ಯ. ಬಂದುಗಳ ಆಗಮನ ಆನಂದದ ಸಮಯ. ಕರ್ಕ; ಶುಭವಾರ್ತೆ. ಕೋರ್ಟವ್ಯಾಜ್ಯ ವಿಚಾರಣೆ, ದೈವಾರಾಧನೆಯಿಂದ ಶುಭ 
 
ಸಿಂಹ :ಧನಾಗಮನ ಶತ್ರು ಪೀಡೆ, ಧನಾಗಮನದ ಜೊತೆಗೆ ವಿಧಿಯ ಆಟದಂತೆ ಶತ್ರುಗಳ ಪೀಡೆಯೂ ಬಾಧಿಸಲಿದ್ದು ಗುರು ಸ್ಮರಣೆ ಮಾಡಿ.
 
ಕನ್ಯಾ. ಅಧಿಕ ಖರ್ಚು, ವೃಥಾ ಅಲೆದಾಟ, ಮಾನಸಿಕವಾಗಿ ಇಲ್ಲದ ನೆಮ್ಮದಿ, ಲಕ್ಷ್ಮೀನೃಸಿಂಹನ ಸ್ಮರಣೆ ಮಾಡಿರಿ 
 
ತುಲಾ; ಧನಹಾನಿ ವೃಥಾ ಸಂಚಾರ, ಕೆಲಸವಾಗದೇ ಇರುವ ಬೇಸರ, ಚಿಂತೆಯಿಂದ ಕಲಹ.
 
ವೃಶ್ಚಿಕ; ಶನಿ ಪೀಡೆ ಹಲ್ಲುನೋವು. ಮಹತ್ವದ ಕೆಲಸ, ಶನೈಶ್ವರನು ಎಚ್ಚರಿಸುತ್ತಿದ್ದು, ಮಹತ್ವದ ಕೆಲಸ ಘಠಿಸಲಿದೆ. 
 
ಧನು; ಸಂಕಷ್ಟ, ಕುಟುಂಬ ಕಲಹ, ವಂಚನೆ. ಮೊದಲೇ ಕುಡಟುಂಬದಲ್ಲಿನ ಆಂತರಿಕ ಕಲಹದಿಂದ ಬೇಸರದಲ್ಲಿರುವ ಈ ರಾಶಿಯವರಿಗೆ ವಂಚನೆ ಮಾಡುವವರೂ ಇದ್ದಾರೆ, ಎಚ್ಚರಿಕೆ ಅಗತ್ಯ.
 
ಮಕರ; ದೂರ ಪ್ರವಾಸ, ಉಲ್ಲಾಸದಾಯಕ ದಿನ, ಕ್ಷೇತ್ರ ದರ್ಶನದ ಸಾಧ್ಯತೆ
 
ಕುಂಭ ;ಕಾರ್ಯಕ್ಕೆ ಅಡೆತಡೆ, ಯಾವುದೇ ಕೆಲಸ ಮಾಡೋಣವೆಂದರೂ ಚಿಕ್ಕ ಪುಟ್ಟ ಅಡೆತಡೆಗಳು ತಲೆಕೆಡಿಸುತ್ತವೆ, ದೈವಾರಾಧನೆಯಿಂದ ಮುನ್ನಡೆಯಿರಿ.
 
ಮೀನ; ಒಳ್ಳೆ ಖರಿದಿ. ಸಂತೋಷದ ದಿನ.ಖರೀದಿಯಿಂದಾಗಿ ಸಂತೋಷ ವೃಧ್ಧಿಯಾಗಲಿದ್ದು, ತಮ್ಮ ಸ್ನೇಹಿತರನ್ನೂ ಸಂತೋಷಪಡಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ