ನಟ ಪವನ್ ಕಲ್ಯಾಣ್ ರಾಜಕೀಯ ಯೋಜನೆ ಇಂದು ಬಹಿರಂಗ!

ಸೋಮವಾರ, 22 ಜನವರಿ 2018 (08:15 IST)
ಹೈದರಾಬಾದ್: ನಟರು ರಾಜಕೀಯಕ್ಕೆ ಪ್ರವೇಶ ಮಾಡುತ್ತಿರುವುದು ಇದು ಮೊದಲೇನಲ್ಲ. ಸಾಕಷ್ಟು ನಟರು ಸಿನಿಮಾ ಬಿಟ್ಟು ರಾಜಕೀಯ ಬದುಕಿಗೆ ಕಾಲಿಟ್ಟಿದ್ದಾರೆ. ಈಗ ನಟ ಪವನ್ ಕಲ್ಯಾಣ್ ಕೂಡ ಅದೇ ಹಾದಿಯಲ್ಲಿದ್ದಾರೆ. ಜನ ಸೇನಾ ಪಕ್ಷ ಸ್ಥಾಪಿಸಿರುವ ತೆಲುಗು ನಟ ಪವನ್ ಕಲ್ಯಾಣ್, ಇಂದು (ಸೋಮವಾರ) ತಮ್ಮ ಮುಂದಿನ ರಾಜಕೀಯ ನಡೆಯನ್ನು ತಿಳಿಸುವುದಾಗಿ ಹೇಳಿದ್ದಾರೆ.


ಕರೀಂನಗರ ಬಳಿಯ ಕೊಂಡಗಟ್ಟುವಿನ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತೇನೆ. ನಂತರ ನನ್ನ ಮುಂದಿನ ಕಾರ್ಯಕ್ರಮಗಳ ಕುರಿತು ಹೇಳುತ್ತೇನೆ. ಜನರ ಬೆಂಬಲ ಪಡೆಯಲು ಪಾದಯಾತ್ರೆ, ಸಮಾವೇಶ ಅಥವಾ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಬೇಕೆ ಎಂಬುದರ ಬಗ್ಗೆ ಇನ್ನೂ ಸರಿಯಾದ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.


ಅದು ಅಲ್ಲದೇ, ತೆಲಂಗಾಣದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುವುದು ನನ್ನ ಮುಖ್ಯ ಉದ್ದೇಶ. ನನ್ನ ಮುಂದಿನ ನಡೆ ಕಾರ್ಯಕರ್ತರ ಅಭಿಪ್ರಾಯದ ಮೇಲೆ ನಿಂತಿದೆ ಎಂದು ಪವನ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ