ಸಾವಿನ ಡ್ರಾಮಾ ಮಾಡಲು ಯಾರೂ ಹಣ ಕೊಟ್ಟಿಲ್ಲ ಎಂದ ಪೂನಂ ಪಾಂಡೆ

Krishnaveni K

ಭಾನುವಾರ, 4 ಫೆಬ್ರವರಿ 2024 (15:05 IST)
ಮುಂಬೈ: ಮೊನ್ನೆಯಷ್ಟೇ ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಮೃತಪಟ್ಟಿರುವುದಾಗಿ ತಮ್ಮ ಬಗ್ಗೆ ತಾವೇ ಸುಳ್ಳು ಸುದ್ದಿ ಹಂಚಿಕೊಂಡಿದ್ದ ಪೂನಂ ಪಾಂಡೆ ಮೇಲೆ ಈಗ ಆರೋಪಗಳ ಸುರಿಮಳೆಯಾಗುತ್ತಿದೆ.

ಸಾವಿನ ವಿಚಾರದಲ್ಲಿ ಆಟವಾಡಿದ ಪೂನಂ ಪಾಂಡೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹಣಕ್ಕಾಗಿ ಚೀಪ್ ಗಿಮಿಕ್ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಯಾವುದೇ ಔಷಧಿ ಕಂಪನಿಯಿಂದ ಹಣ ಪಡೆದುಕೊಂಡಿರಬೇಕು. ಅದಕ್ಕೇ ಈ ರೀತಿ ತಮ್ಮ ಸಾವಿನ ಸುಳ್ಳು ಸುದ್ದಿಯನ್ನು ತಾವೇ ಹರಿಯಬಿಟ್ಟಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಪೂನಂ ಪಾಂಡೆ ಇದೀಗ ತಾನು ಸತ್ತಿರುವುದಾಗಿ ತಾನೇ ಸುಳ್ಳು ಸುದ್ದಿ ಹಬ್ಬಿಸಲು ಜಾಗೃತಿ ಮೂಡಿಸುವ ಒಳ್ಳೆಯ ಉದ್ದೇಶವಿತ್ತಷ್ಟೇ ಹೊರತು ಇದಕ್ಕಾಗಿ ಯಾರಿಂದಲೂ ಹಣ ಪಡೆದುಕೊಂಡಿರಲಿಲ್ಲ ಎಂದು ಪೂನಂ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.

ಹಾಗಿದ್ದರೂ ಸುಳ್ಳು ಸುದ್ದಿ ಹಬ್ಬಿಸಿ ಎಲ್ಲರನ್ನೂ ಬೇಸ್ತು ಬೀಳಿಸಿದ ಪೂನಂ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಜೋರಾಗಿದೆ. ಸ್ವತಃ ಸಿನಿ ಕಾರ್ಮಿಕರ ಸಂಘ ಪೂನಂ ವಿರುದ್ಧ ಎಫ್ ಐಆರ್ ದಾಖಲಿಸಲು ಆಗ್ರಹಿಸಿದೆ. ಅಂತೂ ಈಗ ಏನೋ ಮಾಡಲು ಹೋಗಿ ಏನೋ ಆಗಿರುವ ಪೂನಂ ಪಾಂಡೆ ಒಂದೆಡೆ ಬಿಟ್ಟಿ ಪ್ರಚಾರ ಪಡೆಯುತ್ತಿದ್ದರೆ ಮತ್ತೊಂದೆಡೆ ಸಂಷಕ್ಟಗಳನ್ನು ಎದುರಿಸುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ