ಗುಟ್ಕಾ ಜಾಹೀರಾತು: ಶಾರುಖ್ ಖಾನ್, ಅಕ್ಷಯ್ ಮತ್ತು ಅಜಯ್ ದೇವಗನ್ ಗೆ ನೋಟಿಸ್

ಭಾನುವಾರ, 10 ಡಿಸೆಂಬರ್ 2023 (14:22 IST)
Photo Courtesy: Twitter
ನವದೆಹಲಿ: ಗುಟ್ಕಾ ಜಾಹೀರಾತಿನ ರಾಯಭಾರಿಗಳಾಗಿರುವ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಗೆ ಅಲಹಾಬಾದ್ ಕೋರ್ಟ್ ಸಲಹೆಯಂತೆ ಕೇಂದ್ರ ನೋಟಿಸ್ ನೀಡಿದೆ.

ವ್ಯಕ್ತಿಯೊಬ್ಬರು ಈ ಸ್ಟಾರ್ ನಟರು ಗುಟ್ಕಾ ಜಾಹೀರಾತಿನ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಕೋರ್ಟ್ ಕೇಂದ್ರಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು.

ಈಗಾಗಲೇ ಅಮಿತಾಭ್ ಬಚ್ಚನ್ ತಮ್ಮ ಒಪ್ಪಂದದ ಅವಧಿ ಮುಗಿದರೂ ಗುಟ್ಕಾ ಕಂಪನಿಯೊಂದು ತಮ್ಮನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುತ್ತಿದೆ ಎಂದು ಲೀಗಲ್ ನೋಟಿಸ್ ನೀಡಿದ್ದರು.

ಇದೀಗ ಶಾರುಖ್, ಅಕ್ಷಯ್, ಅಜಯ್ ದೇವಗನ್ ರಂತಹ ಪ್ರಶಸ್ತಿ ವಿಜೇತ ನಟರು ಜನರಿಗೆ ಮಾದರಿಯಾಗುವ ಬದಲು ಇಂತಹ ಜಾಹೀರಾತಿನಲ್ಲಿ ನಟಿಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ