ಜನರಿಗೆ ನೀಡಿದ್ದ ಭರವಸೆ ಈಡೇರಿಸದ ಸಚಿವರು; ಬೀದಿಗಿಳಿದು ಲಾಕ್ ಡೌನ್ ಉಲ್ಲಂಘಿಸಿದ ಜನರು

ಶುಕ್ರವಾರ, 17 ಏಪ್ರಿಲ್ 2020 (10:23 IST)

ಗದಗ : ಲಾಕ್ ಡೌನ್ ಹಿನ್ನಲೆಯಲ್ಲಿ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಗದಗದಲ್ಲಿ ಜನರು ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಾರೆ.

 

ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ನಿಂದಾಗಿ  ರಂಗನವಾಡ ಗಲ್ಲಿಯ ಜನರಿಗೆ  ಅಗತ್ಯ ವಸ್ತುಗಳ ಉಚಿತ ಪೂರೈಕೆ ಮಾಡುವುದಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್  ಭರವಸೆ ನೀಡಿದ್ದರು.

 

ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಭರವಸೆ ಈಡೇರದ ಹಿನ್ನಲೆ ಗದಗ ಕಂಟೈನಮೆಂಟ್ ಪ್ರದೇಶದಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸುವುದರ ಮೂಲಕ  ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ