ಕೊರೋನಾ ಭಯದಿಂದ ರೈನಾ ಭಾರತಕ್ಕೆ ವಾಪಸ್ ಬಂದರೇ?!

ಸೋಮವಾರ, 31 ಆಗಸ್ಟ್ 2020 (10:43 IST)
ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೊರೋನಾ ಭಯ ಅವರಿಸುತ್ತಿದ್ದಂತೇ ದಿಡೀರ್ ಆಗಿ ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಭಾರತಕ್ಕೆ ಮರಳಲು ಕಾರಣವೇನು ಎಂಬುದರ ಬಗ್ಗೆ ಈಗ ಹಲವು ವಿಶ್ಲೇಷಣೆಗಳು ನಡೆಯುತ್ತಿವೆ.


ಮೂಲಗಳ ಪ್ರಕಾರ ರೈನಾ ಕುಟುಂದಲ್ಲಿ ನಡೆದ ಕೊಲೆಯೇ ಅವರು ಮರಳಲು ಕಾರಣ ಎನ್ನಲಾಗಿದೆಯಾದರೂ, ಇನ್ನು ಕೆಲವರು ಕೊರೋನಾ ಭಯದಿಂದ ರೈನಾ ಮರಳಿದ್ದಾರೆ ಎನ್ನುತ್ತಿದ್ದಾರೆ.

ಆಂಗ್ಲ ಮಾಧ್ಯಮವೊಂದರ ಪ್ರಕಾರ ಚೆನ್ನೈ ತಂಡದಲ್ಲಿ ಕೊರೋನಾ ಕೇಸ್ ಪತ್ತೆಯಾದ ಬೆನ್ನಲ್ಲೇ ರೈನಾ ಆತಂಕಕ್ಕೊಳಗಾಗಿದ್ದರು. ಪದೇ ಪದೇ ನಾಯಕ ಧೋನಿ, ಕೋಚ್ ಫ್ಲೆಮಿಂಗ್ ಸೇರಿದಂತೆ ಇಡೀ ತಂಡದ ಸಹ ಆಟಗಾರರನ್ನು ಸಂಪರ್ಕಿಸಿ ತಮ್ಮ ಆತಂಕ ತೋಡಿಕೊಳ್ಳುತ್ತಿದ್ದರು. ಕೊನೆಗೆ ಅವರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಚೆನ್ನೈ ಮ್ಯಾನೇಜ್ ಮೆಂಟ್ ಅವರಿಗೆ ಭಾರತಕ್ಕೆ ಬರಲು ಅವಕಾಶ ಮಾಡಿಕೊಟ್ಟಿದೆ ಎನ್ನಲಾಗಿದೆ. ಸತ್ಯ ಯಾವುದೇ ಇದ್ದರೂ ರೈನಾ ಇಲ್ಲದೇ ಇರುವುದು ಚೆನ್ನೈ ತಂಡಕ್ಕೆ ಹೊಡೆತ ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ