ಶಿಖರ್ ಧವನ್ ಹೊಡೆತಕ್ಕೆ ಚೆಂಡು ತೂತು!

ಬುಧವಾರ, 24 ಮಾರ್ಚ್ 2021 (10:21 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮೂರನೇ ಓವರ್ ನಲ್ಲಿಯೇ ಬಾಲ್ ಬದಲಿಸಬೇಕಾಯಿತು! ಇದೊಂದು ಹೊಸ ದಾಖಲೆಯೇ.

 

ಇದಕ್ಕೆ ಕಾರಣವೇನು ಗೊತ್ತಾ? ಮೂರನೇ ಓವರ್ ನಲ್ಲಿ ಬಾಲ್ ತೂತಾಗಿರುವುದು ಬೌಲರ್ ನ ಗಮನಕ್ಕೆ ಬಂದಿದೆ. ತಕ್ಷಣ ಅವರು ಅಂಪಾಯರ್ ಗಮನಕ್ಕೆ ಈ ವಿಚಾರ ತಂದಿದ್ದಾರೆ. ಆಗ ಹೊಸ ಚೆಂಡಿನಲ್ಲಿ ಕೇವಲ 16 ಎಸೆತವನ್ನಷ್ಟೇ ಎಸೆಯಲಾಗಿತ್ತು.

ಶಿಖರ್ ಧವನ್ ಬ್ಯಾಟಿಂಗ್ ವೇಳೆ ಬಾಲ್ ಹೊಡೆದ ರಭಸಕ್ಕೆ ಚೆಂಡು ಬೌಂಡರಿ ಗೆರೆ ಬಳಿ ಯಾವುದೋ ವಸ್ತುವಿಗೆ ತಾಕಿ ಬಾಲ್ ತೂತಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಮೂಲಕ ಬಾಲ್ ಕೂಡಾ ಹೊಸ ದಾಖಲೆ ಮಾಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ