ಟಿ20 ಆಟಗಾರರಿಗೆ ತಕ್ಷಣವೇ ಅಹಮ್ಮದಾಬಾದ್ ನಲ್ಲಿ ಸೇರಲು ಬುಲಾವ್ ನೀಡಿದ ಬಿಸಿಸಿಐ

ಮಂಗಳವಾರ, 23 ಫೆಬ್ರವರಿ 2021 (09:04 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಜಾರಿಯಲ್ಲಿರುವಾಗಲೇ ಸೀಮಿತ ಓವರ್ ಗಳ ಪಂದ್ಯವಾಡಲಿರುವ ಕ್ರಿಕೆಟಿಗರಿಗೆ ಅಹಮ್ಮದಾಬಾದ್ ಗೆ ಬಂದು ಸೇರುವಂತೆ ಬಿಸಿಸಿಐ ತಾಕೀತು ಮಾಡಿದೆ.


ಸದ್ಯಕ್ಕೆ ಕೊರೋನಾ ಭೀತಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಹೀಗಾಗಿ ಆಟಗಾರರು ಪಂದ್ಯಕ್ಕೆ ಮೊದಲು ಜೈವಿಕ ಸುರಕ್ಷಾ ವಲಯದಲ್ಲಿ ಕಳೆಯುವುದು ಕಡ್ಡಾಯವಾಗಿದೆ. ಹೀಗಾಗಿ ಮಾರ್ಚ್ 1 ಕ್ಕೆ ಶಿಖರ್ ಧವನ್ ಸೇರಿದಂತೆ ಟಿ20 ಸರಣಿಗೆ ಆಯ್ಕೆಯಾದ ಆಟಗಾರರು ಅಹಮ್ಮದಾಬಾದ್ ಗೆ ಬಂದಿಳಿಯಲು ಬಿಸಿಸಿಐ ಸೂಚಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ