ಕೆಎಲ್ ರಾಹುಲ್, ಮಯಾಂಕ್ ಗೆ ರಿಲೀಫ್ ನೀಡಿದ ಬಿಸಿಸಿಐ

ಮಂಗಳವಾರ, 22 ಜೂನ್ 2021 (09:44 IST)
ಸೌಥಾಂಪ್ಟನ್: ಸುದೀರ್ಘ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಸೇರಿದಂತೆ ಐವರು ಕ್ರಿಕೆಟಿಗರಿಗೆ ಬಿಸಿಸಿಐ ಬಯೋ ಬಬಲ್ ವಾತಾವರಣದಿಂದ ರಿಲೀಫ್ ನೀಡಿದೆ.


ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡುತ್ತಿರುವ ಆಟಗಾರರನ್ನು ಹೊರತುಪಡಿಸಿ ಉಳಿದ ಐವರು ಆಟಗಾರರಿಗೆ ಸದ್ಯದ ಮಟ್ಟಿಗೆ ಜೈವಿಕ ಸುರಕ್ಷಾ ವಲಯದಿಂದ ಹೊರಬರಲು ಅನುಮತಿ ನೀಡಲಾಗಿದೆ.

ಸುದೀರ್ಘವಾಗಿ ಬಯೋಬಬಲ್ ವಾತಾವರಣದಲ್ಲಿ ಕಳೆಯುವಾಗ ಆಟಗಾರರು ಮಾನಸಿಕವಾಗಿ ಕುಗ್ಗಿ ಹೋಗಬಾರದು ಎಂಬ ಉದ್ದೇಶಕ್ಕೆ ರಾಹುಲ್, ಮಯಾಂಕ್ ಅಗರ್ವಾಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್ ಗೆ ಬಿಸಿಸಿಐ ರಿಲೀಫ್ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ