2006-07ರಲ್ಲಿ ಬಿಸಿಸಿಐನಿಂದ 3.13 ಕೋಟಿ ಚೆಕ್ ನಗದೀಕರಿಸಿ ಕ್ರಿಕೆಟ್ ಸಂಸ್ಥೆ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಯಲ್ಲಿ ಇರಿಸಿದ ಆರೋಪದ ಮೇಲೆ ಗೋವಾ ಪೊಲೀಸರು ಮೂವರು ಉನ್ನತ ದರ್ಜೆಯ ಜಿಸಿಇ ಅಧಿಕಾರಿಗಳು ಸೇರಿ ಅದರ ಅಧ್ಯಕ್ಷರಾದ ಚೇತನ್ ದೇಸಾಯಿ ಕಾರ್ಯದರ್ಶಿ ವಿನೋದ್ ಪಾಡ್ಕೆ ಮತ್ತು ಲೆಕ್ಕಾಧಿಕಾರಿ ಅಕ್ಬರ್ ಮುಲ್ಲಾರನ್ನು ಬಂಧಿಸಿದ್ದರು. ಇಂತಹ ಘಟನೆಯ ಹಿನ್ನೆಲೆಯಲ್ಲಿ ಬಿಸಿಸಿಐ ರಾಜ್ಯ ಸಂಸ್ಥೆಗಳಿಗೆ ಫಂಡ್ ವಿತರಣೆ ಮಾಡುವಾಗ ಸ್ಕ್ರೂ ಬಿಗಿಮಾಡಲು ನಿರ್ಧರಿಸಿದೆ.