Bengaluru stampede: ಮೊನ್ನೆಯಷ್ಟೇ ಕೊಹ್ಲಿ ಜೊತೆ ಸುತ್ತಾಟ, ಇಂದು ಪೊಲೀಸರ ಜೊತೆ ಅಲೆದಾಟ

Krishnaveni K

ಶುಕ್ರವಾರ, 6 ಜೂನ್ 2025 (14:45 IST)
Photo Credit: X
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಕ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಆರ್ ಸಿಬಿ ಫ್ರಾಂಚೈಸಿಗೆ ಸಂಬಂಧಪಟ್ಟ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇವರಲ್ಲಿ ವಿರಾಟ್ ಕೊಹ್ಲಿಗೆ ಆಪ್ತರಾಗಿದ್ದ ಆರ್ ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಕೂಡಾ ಸೇರಿದ್ದಾರೆ. ಈತ ಮೊನ್ನೆಯವರೆಗೂ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೊತೆಗೇ ಎಲ್ಲೇ ಹೋದರೂ ಕಾಣಿಸಿಕೊಳ್ಳುತ್ತಿದ್ದರು. ಅವರ ಪತ್ನಿ ಅನುಷ್ಕಾ ಜೊತೆಗೇ ಪಂದ್ಯ ವೀಕ್ಷಿಸುತ್ತಿದ್ದರು.

ಮೊನ್ನೆ ಮೊನ್ನೆಯವರೆಗೂ ಸೆಲೆಬ್ರಿಟಿಯಾಗಿದ್ದ ನಿಖಿಲ್ ಇದೀಗ ಪೊಲೀಸರ ಬಂಧನದಲ್ಲಿ ಕೋರ್ಟು ಕಚೇರಿ ಎಂದು ಅಲೆದಾಡುವಂತಾಗಿದೆ. ಇಂದು ಕೆಂಪೇಗೌಡ ಏರ್ ಪೋರ್ಟ್ ಮೂಲಕ ಮುಂಬೈಗೆ ತೆರಳಲು ಸಿದ್ಧರಾಗಿದ್ದ ನಿಖಿಲ್ ಸೋಸಲೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು.

ಇದೀಗ ಪೊಲೀಸರು ಎಲ್ಲಾ ಆರೋಪಿಗಳನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಇದಾದ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ