ಟೀಂ ಇಂಡಿಯಾ ಕೋಚ್ ಆಗಲು ಈ ದಿಗ್ಗಜ ಕ್ರಿಕೆಟಿಗನನ್ನು ಸಂಪರ್ಕಿಸಿದ್ದ ಬಿಸಿಸಿಐ!

ಮಂಗಳವಾರ, 21 ಸೆಪ್ಟಂಬರ್ 2021 (12:03 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಟಿ20 ವಿಶ್ವಕಪ್ ಬಳಿಕ ರಾಜೀನಾಮೆ ನೀಡುವುದು ಪಕ್ಕಾ ಆಗಿದೆ.


ಇದೀಗ ಅವರ ಸ್ಥಾನಕ್ಕೆ ಟೀಂ ಇಂಡಿಯಾ ಕೋಚ್ ಯಾರಾಗಬೇಕು ಎನ್ನುವ ಬಗ್ಗೆ ಬಿಸಿಸಿಐ ವಲಯದಲ್ಲಿ ಚರ್ಚೆ ನಡೆದಿದೆ. ಮಾಜಿ ದಿಗ್ಗಜ ಕ್ರಿಕೆಟಿಗರನ್ನು ಕೋಚ್ ಹುದ್ದೆಗೆ ಅರ್ಜಿ ಹಾಕಲು ಬಿಸಿಸಿಐ ಮನವಿ ಮಾಡುತ್ತಿದೆ.

 ಈ ರೇಸ್ ನಲ್ಲಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಹೆಸರು ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಶ್ರೀಲಂಕಾ ಮಾಜಿ ನಾಯಕ ಮಹೇಲ ಜಯವರ್ಧನ್ ಅವರನ್ನೂ ಬಿಸಿಸಿಐ ಸಂಪರ್ಕಿಸಿತ್ತು ಎಂಬ ಮಾತಿದೆ. ಮುಂಬೈ ಇಂಡಿಯನ್ಸ್ ತಂಡದ ಹಾಲಿ ಕೋಚ್ ಆಗಿರುವ ಮಹೇಲ ಈ ಆಫರ್ ನಿರಾಕರಿಸಿದರು ಎಂಬ ಸುದ್ದಿ ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ