ಧೋನಿಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡೆ ಎಂದ ಕ್ರಿಕೆಟಿಗ ಯಾರು ಗೊತ್ತಾ?

ಶುಕ್ರವಾರ, 15 ಜೂನ್ 2018 (08:48 IST)
ಬೆಂಗಳೂರು: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದೇ ಕ್ರಿಕೆಟಿಗರಿಗೆ ಸವಾಲಿನ ಕೆಲಸ. ಹಾಗಿರುವಾಗ ಸ್ಥಾನ ಕಳೆದುಕೊಂಡಿದ್ದಕ್ಕೆ ನಿರಾಶೆ ಪಡುವ ಬದಲು ವಿಕೆಟ್ ಕೀಪರ್ ಬ್ಯಾಟ್ಸ್ ‍ಮನ್ ದಿನೇಶ್ ಕಾರ್ತಿಕ್ ಹೆಮ್ಮೆ ಪಟ್ಟುಕೊಂಡಿದ್ದಾರೆ!

ಧೋನಿಗಿಂತ ಮೊದಲೇ ಪ್ರವರ್ಧಮಾನಕ್ಕೆ ಬಂದರೂ ದಿನೇಶ್ ಕಾರ್ತಿಕ್ ಗೆ ಹೆಚ್ಚು ಅವಕಾಶ ಸಿಗಲಿಲ್ಲ. ಇದಕ್ಕೆ ಕಾರಣ ಧೋನಿ ಭಾರತ ತಂಡದ ಖಾಯಂ ವಿಕೆಟ್ ಕೀಪರ್ ಆಗಿ ಮಿಂಚಿದ್ದು. ಆದರೆ ಹಾಗಂತ ಕಾರ್ತಿಕ್ ಗೆ ಬೇಸರವಿಲ್ಲವಂತೆ.

ಇದೀಗ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಬಹುದಿನಗಳ ನಂತರ ಟೀಂ ಇಂಡಿಯಾ ಟೆಸ್ಟ್ ತಂಡವನ್ನು ಕೂಡಿಕೊಂಡಿರುವ ದಿನೇಶ್ ಕಾರ್ತಿಕ್ ‘ನಾನು ಹಿಂದೆಲ್ಲಾ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಕ್ಕೆ ಬೇಸರವಿಲ್ಲ. ನಾನು ಒಬ್ಬ ಸಾಮಾನ್ಯ ಆಟಗಾರನಿಗೆ ಸ್ಥಾನ ಕಳೆದುಕೊಂಡಿರಲಿಲ್ಲ. ಧೋನಿ ಎಂಬ ಮಹಾನ್ ಆಟಗಾರನಿಗಾಗಿ ಸ್ಥಾನ ಕಳೆದುಕೊಂಡೆ’ ಎಂದು ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ