ವಿರಾಟ್ ಕೊಹ್ಲಿಯನ್ನು ಖಾಯಂ ನಾಯಕ ಮಾಡಿ: ಆರ್ ಸಿಬಿ ಫ್ಯಾನ್ಸ್ ಆಗ್ರಹ

ಮಂಗಳವಾರ, 25 ಏಪ್ರಿಲ್ 2023 (06:30 IST)
Photo Courtesy: Twitter
ಬೆಂಗಳೂರು: ಐಪಿಎಲ್ 2023 ರಲ್ಲಿ ಖಾಯಂ ನಾಯಕ ಫಾ ಡು ಪ್ಲೆಸಿಸ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಎರಡು ಪಂದ್ಯಗಳಿಗೆ ಆರ್ ಸಿಬಿಯ ನಾಯಕರಾಗಿ ತಂಡ ಮುನ್ನಡೆಸಿದ್ದರು.

ಈ ಎರಡೂ ಪಂದ್ಯಗಳನ್ನೂ ಆರ್ ಸಿಬಿ ರೋಚಕವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ ಅಭಿಮಾನಿಗಳು ಆರ್ ಸಿಬಿ ಮ್ಯಾನೇಜ್ ಮೆಂಟ್ ಗೆ ಹೊಸ ಬೇಡಿಕೆಯಿಟ್ಟಿದ್ದಾರೆ.

ಕೊಹ್ಲಿ ಈ ಮೊದಲು ಆರ್ ಸಿಬಿ ನಾಯಕರಾಗಿದ್ದರು. ಆದರೆ ಕಳೆದ ಎರಡು ಋತುವಿನಿಂದ ಕೊಹ್ಲಿ ನಾಯಕತ್ವ ತ್ಯಜಿಸಿದ್ದರಿಂದ ಫಾ ಡು ತಂಡದ ನಾಯಕರಾಗಿದ್ದಾರೆ. ಇದೀಗ ಸತತ ಎರಡು ಪಂದ್ಯ ಗೆದ್ದ ಬಳಿಕ ಅಭಿಮಾನಿಗಳು ಕೊಹ್ಲಿಯನ್ನೇ ಮತ್ತೆ ಖಾಯಂ ನಾಯಕ ಮಾಡಿ ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ