ಐಸಿಸಿ ಹೊಸ ರೂಲ್ಸ್ ನಿಂದ ಭಾರತ-ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಗೊಂದಲ

ಸೋಮವಾರ, 9 ಅಕ್ಟೋಬರ್ 2017 (10:22 IST)
ಮುಂಬೈ: ಐಸಿಸಿ ಇತ್ತೀಚೆಗೆ ತಂದ ಹೊಸ ನಿಯಮಗಳ ಬಗ್ಗೆ ಅರಿವಿಲ್ಲದೇ ಭಾರತ  ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರು ಮೈದಾನದಲ್ಲಿ ಗೊಂದಲಕ್ಕೀಡಾದ ಘಟನೆ ಮೊದಲ ಟಿ20 ಪಂದ್ಯದಲ್ಲಿ ನಡೆದಿದೆ.

 
ಹೊಸ ನಿಯಮದ ಪ್ರಕಾರ 10 ಓವರ್ ಗಿಂತ ಕಡಿಮೆ ಇರುವ ಪಂದ್ಯದಲ್ಲೂ ಡಿಆರ್ ಎಸ್ ಗೆ ಮನವಿ ಸಲ್ಲಿಸಲು ಅವಕಾಶವಿದೆ. ಆದರೆ ಇದರ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಮಾಹಿತಿಯಿರಲಿಲ್ಲ. ನಂತರ ಗಾಯಾಳುವಾಗಿ ಹೊರಗುಳಿದಿದ್ದ ನಾಯಕ ಸ್ಟೀವ್ ಸ್ಮಿತ್ ಪಾನೀಯ ವಿತರಿಸಲು ಮೈದಾನಕ್ಕೆ ಬಂದಾಗಲೇ ಗೊತ್ತಾಯಿತು.

ನಿಯಮ ಬದಲಾಗಿರುವುದು ಗೊತ್ತೇ ಇರಲಿಲ್ಲ ಎಂದು ಆಸೀಸ್ ಆಟಗಾರರು ಹೇಳಿದ್ದಾರೆ. ಇತ್ತ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಕೂಡಾ ನಿಯಮದಲ್ಲಿ ಆದ ಬದಲಾವಣೆ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ