ಶ್ರೀಲಂಕಾ ಸರಣಿಯಿಂದ ಮುರಳಿ ವಿಜಯ್ ಔಟ್

ಸೋಮವಾರ, 17 ಜುಲೈ 2017 (20:10 IST)
ಮಣಿಕಟ್ಟಿನ ನೋವಿಗೆ ತುತ್ತಾಗಿರುವ ಓಪನರ್ ಮುರಳಿ ವಿಜಯ್ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು, ಶಿಖರ್ ಧವನ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಪೂರ್ವಾಭ್ಯಾಸ ಪಂದ್ಯದ ವೇಳೆ ಮುರಳಿ ವಿಜಯ್ ಮಣಿಕಟ್ಟಿನ ನೋವು ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆಯೂ ಮುರಳಿ ವಿಜಯ್ ಇದೇ ಸಮಸ್ಯೆಗೆ ತುತ್ತಾಗಿದ್ದರು ಎಂದು ಬಿಸಿಸಿಐ ವೈದ್ಯರ ಸಮಿತಿ ಮಾಹಿತಿ ನೀಡಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ ಆಯ್ಕೆ ಸಮಿತಿ, ಮುರಳಿ ವಿಜಯ್ ಸ್ಥಾನಕ್ಕೆ ಶಿಖರ್ ಧವನ್ ಆಯ್ಕೆಯನ್ನ ಖಚಿತಪಡಿಸಿದೆ.

ಸದ್ಯ, ಕುಟುಂಬದ ಜೊತೆ ಡಿಸ್ನಿ ಲ್ಯಾಂಡ್`ನಲ್ಲಿ ಶಿಖರ್ ಧವನ್ ರಜಾ ಪ್ರವಾಸಕ್ಕೆ ತೆರಳಿದ್ದು, ಶ್ರೀಲಂಕಾ ಸರಣಿ ಆಡಲು ವಾಪಸ್ ಬರಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಻ತ್ಯುತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಧವನ್, ವಿಂಡೀಸ್ ವಿರುದ್ಧ ವಿಫಲರಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ