ಐಪಿಎಲ್ 2023: ಮಳೆ ಕಾಟದ ನಡುವೆ ಕೊನೆಗೂ ಶುರು ಆರ್ ಸಿಬಿ-ಗುಜರಾತ್ ಪಂದ್ಯ

ಭಾನುವಾರ, 21 ಮೇ 2023 (19:51 IST)
Photo Courtesy: Twitter
ಬೆಂಗಳೂರು: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ ಮಹತ್ವದ ಕೊನೆಯ ಲೀಗ್ ಪಂದ್ಯವಾಡುತ್ತಿದೆ.

ಇಂದು ಗೆದ್ದರೆ ಆರ್ ಸಿಬಿಗೆ ಪ್ಲೇ ಆಫ್ ಹಂತಕ್ಕೇರುವ ಅವಕಾಶವಿದೆ. ಆದರೆ ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು ಪಂದ್ಯ ತಡವಾಗಿ ಆರಂಭವಾಗುತ್ತಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಮೈದಾನ ಒಣಗಿಸಲು ಅತ್ಯಾಧುನಿಕ ತಂತ್ರಜ್ಞಾನವಿರುವುದರಿಂದ ಪಂದ್ಯ ನಡೆಯುತ್ತಿದೆ. ಇದೀಗಕ ಕೆಲವು ಗಂಟೆಯಿಂದ ವರುಣ ಕೊಂಚ ಬಿಡುವು ನೀಡಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಇದೀಗ ಟಾಸ್ ನಡೆದಿದ್ದು, ಗುಜರಾತ್ ಟೈಟನ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಆರ್ ಸಿಬಿ ಒಂದು ಬದಲಾವಣೆ ಮಾಡಿಕೊಂಡಿದ್ದು, ಕರ್ಣ್ ಶರ್ಮ ಸ್ಥಾನಕ್ಕೆ ಹಿಮಾಂಶು ಶರ್ಮಾರನ್ನು ಆಡಲಿಳಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ