ಐಪಿಎಲ್ 2024 ಹರಾಜು: ಒಬ್ಬ ಕನ್ನಡಿಗನನ್ನು ಕೈ ಬಿಟ್ಟು ಇನ್ನೊಬ್ಬರನ್ನು ಕರೆತಂದ ಲಕ್ನೋ

ಸೋಮವಾರ, 27 ನವೆಂಬರ್ 2023 (09:58 IST)
ಮುಂಬೈ: ಐಪಿಎಲ್ 2024 ಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಕನ್ನಡಿಗ ಬ್ಯಾಟಿಗ ಕರಣ್ ನಾಯರ್ ಕೈ ಬಿಟ್ಟು ಈಗ ಮತ್ತೊಬ್ಬ ಕನ್ನಡಿಗನನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಆಟಗಾರರ ರಿಟೆನ್ಷನ್ ಮತ್ತು ರಿಲೀಸ್ ಮಾಡುವ ಪಟ್ಟಿ ಕೊಡಲು ನಿನ್ನೆ ಅಂತಿಮ ದಿನವಾಗಿತ್ತು. ಅದರಂತೆ ಲಕ್ನೋ ಕೂಡಾ ಇತರೆ ತಂಡಗಳಂತೆ ರಿಲೀಸ್ ಆದ ಮತ್ತು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ.

ನಾಯಕ ಕೆಎಲ್ ರಾಹುಲ್ ರನ್ನು ತಂಡ ಉಳಿಸಿಕೊಂಡಿದೆ. ಲಕ್ನೋ ತಂಡ  ಕನ್ನಡಿಗ ಕರಣ್ ನಾಯರ್ ನನ್ನು ಕೈ ಬಿಟ್ಟಿದೆ. ಆದರೆ ಇನ್ನೊಬ್ಬ ಕನ್ನಡಿಗ ದೇವದತ್ತ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ.

ಉಳಿದಂತೆ ಕೆ. ಗೌತಮ್ ತಂಡದಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಈಗ ಲಕ್ನೋ ತಂಡದಲ್ಲಿ ಮೂವರು ಕನ್ನಡಿಗರು ಲಕ್ನೋ ತಂಡದಲ್ಲಿದ್ದಂತಾಗಿದೆ. ದೇವದತ್ತ ಪಡಿಕ್ಕಲ್ ಬದಲಿಗೆ ಆವೇಶ್ ಖಾನ್ ರನ್ನು ಕೈ ಬಿಟ್ಟಿದೆ. ಉಳಿದಂತೆ ಮಿನಿ ಹರಾಜಿನಲ್ಲಿ ಯಾರು ತಂಡಕ್ಕೆ ಸೇರ್ಪಡೆಯಾಗುತ್ತಾರೋ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ