IPL 2025 Final: ಹನುಮಪ್ಪಾ ಆರ್ ಸಿಬಿನ ಕಾಪಾಡಪ್ಪ.. ಪ್ರಾರ್ಥನೆ ಶುರು
ಸೋಷಿಯಲ್ ಮೀಡಿಯಾದಲ್ಲಿರಲಿ, ದೇವಾಲಯಗಳಲ್ಲಿರಲಿ ಆರ್ ಸಿಬಿ ಪರವಾಗಿ ಪೂಜೆ ಜೋರಾಗಿಯೇ ನಡೆಯುತ್ತಿದೆ. ಮಂಡ್ಯದಲ್ಲಿ ಆರ್ ಸಿಬಿ ಕಟ್ಟಾ ಅಭಿಮಾನಿಗಳು ಶಕ್ತಿದೇವತೆ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದ್ದಾರೆ.
ಇಷ್ಟೇ ಅಲ್ಲ, ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಇಷ್ಟ ದೇವರ ಫೋಟೋ ಹಾಕಿ ದೇವಾ ಈವತ್ತು ಆರ್ ಸಿಬಿನ ಕಾಪಾಡಪ್ಪಾ ಎಂದು ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ. ನಾಡದೇವತೆ ಚಾಮುಂಡಿ ತಾಯಿ, ಅಯೋಧ್ಯೆ ರಾಮನಿಗೆ ಮೊರೆಯಿಡುತ್ತಿದ್ದಾರೆ.
ಆರ್ ಸಿಬಿ ಇದು ನಾಲ್ಕನೇ ಬಾರಿಗೆ ಫೈನಲ್ ತಲುಪಿದೆ. ಕಳೆದ ಮೂರೂ ಬಾರಿಯೂ ಫೈನಲ್ ನಲ್ಲಿ ಆರ್ ಸಿಬಿಗೆ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ 17 ವರ್ಷಗಳಿಂದ ಅಭಿಮಾನಿಗಳು ಈ ಸಲ ಕಪ್ ನಮ್ಮದಾಗುತ್ತದೆ ಎಂಬ ಭರವಸೆಯೊಂದಿಗೆ ಕಾಯುತ್ತಿದ್ದಾರೆ.