ಅಹಮ್ಮದಾಬಾದ್: ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ಗೇರಿಸಿದರೂ ನಾಯಕ ಶ್ರೇಯಸ್ ಅಯ್ಯರ್ ಮುಖದಲ್ಲಿ ನಗುವೇ ಇಲ್ಲ. ಶ್ರೇಯಸ್ ಹೀಗ್ಯಾಕೆ ಮಾಡಿದರು ಎಂದು ಅಭಿಮಾನಿಗಳಿಗೆ ಅನಿಸಿರಬಹುದು.
ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಕ್ವಾಲಿಫೈಯರ್ 1 ರಲ್ಲಿ ಆಡಿದ್ದ ಪಂಜಾಬ್ ತಂಡ ಆರ್ ಸಿಬಿ ಎದುರು ಸೋತಿತು. ಆಗ ಎಲ್ಲರೂ ಪಂಜಾಬ್ ನ್ನು ಅದೃಷ್ಟದಿಂದ ಕ್ವಾಲಿಫೈಯರ್ ಗೆ ಬಂದವರು ಎಂದು ಕುಹುಕವಾಡಿದ್ದರು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿದ ಪಂಜಾಬ್ ಪಡೆ ಅಧಿಕಾರಯುತವಾಗಿ ಫೈನಲ್ ಗೇರಿತು. ಗೆಲುವಿನ ರನ್ ನ್ನು ಸ್ವತಃ ನಾಯಕ ಶ್ರೇಯಸ್ ಅಯ್ಯರ್ ಸಿಡಿಸಿದರು.
ಇದು ಅವರ ನಾಯಕತ್ವದಲ್ಲಿ ಸತತ ಎರಡನೇ ಫೈನಲ್. ಕಳೆದ ಬಾರಿ ಶ್ರೇಯಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಫೈನಲ್ ಗೇರಿದ್ದರಲ್ಲದೆ, ಚಾಂಪಿಯನ್ ಕೂಡಾ ಆಗಿದ್ದರು. ಇದೀಗ ಎರಡನೇ ಬಾರಿಗೆ ಪಂಜಾಬ್ ತಂಡದ ನಾಯಕರಾಗಿ ಫೈನಲ್ ಗೇರಿದ್ದಾರೆ. ಹೀಗಾಗಿಯೇ ಅವರ ನಾಯಕತ್ವದ ಬಗ್ಗೆ ಈಗ ಹೊಗಳಿಕೆಯ ಸುರಿಮಳೆಯಾಗುತ್ತಿದೆ.
ಹಾಗಿದ್ದರೂ ನಿನ್ನೆಯ ಪಂದ್ಯ ಸೋಲಿಸಿದ ಬಳಿಕ ಅವರು ಸೆಲೆಬ್ರೇಷನ್ ಬಿಡಿ ಒಂದು ನಗು ಕೂಡಾ ಆಡಿಲ್ಲ. ಹೀಗಾಗಿಯೇ ಅಭಿಮಾನಿಗಳು ಅವರನ್ನು ಪ್ರಬುದ್ಧ ನಡೆ ಎಂದು ಕೊಂಡಾಡಿದ್ದಾರೆ. ಈಗಿನ್ನೂ ಫೈನಲ್ ಗೇರಿದ್ದೇವೆ, ನಿಜವಾದ ಸಾಧನೆ ಫೈನಲ್ ನಲ್ಲಿ ಮಾಡಬೇಕು. ಆಗಲೇ ನಗು, ಸಂಭ್ರಮವೆಲ್ಲಾ ಎನ್ನುವಂತಿತ್ತು ಅವರ ಮುಖಭಾವ.