ಮುಂಬೈ: ಐಪಿಎಲ್ 2025 ರಲ್ಲಿ ಕಪ್ ಗೆದ್ದ ಖುಷಿ ಕೆಲವೇ ಕ್ಷಣ ಮಾತ್ರವಿತ್ತು. ಚಿನ್ನಸ್ವಾಮಿಯಲ್ಲಿ ಸಂಭ್ರಮಾಚರಣೆ ವೇಳೆ ನಡೆದ ದುರಂತದ ಪರಿಣಾಮ ಈಗ ಐಪಿಎಲ್ ಬ್ಯಾನ್ ಆಗಬಹುದು ಎನ್ನಲಾಗುತ್ತಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದರು. ಈ ದುರಂತ ಐಪಿಎಲ್ ಗೇ ಕಪ್ಪು ಚುಕ್ಕೆಯಾಗಿದೆ. ಘಟನೆ ಸಂಬಂಧ ಆರ್ ಸಿಬಿ ಮ್ಯಾನೇಜ್ ಮೆಂಟ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಈ ಘಟನೆ ಐಪಿಎಲ್ ಗೇ ಕಪ್ಪು ಚುಕ್ಕೆಯಾಗಿದೆ.
ಹೀಗಾಗಿ ಈಗ ಮುಂದಿನ ಸೀಸನ್ ಗೆ ಆರ್ ಸಿಬಿ ಟೀಂ ನಿಷೇಧಕ್ಕೊಳಗಾಗುವ ಭೀತಿಯಲ್ಲಿದೆ. ಘಟನೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನೆಗಳ ಬಗ್ಗೆ ಬಿಸಿಸಿಐ ಕೇವಲ ಮೂಕ ಪ್ರೇಕ್ಷಕರಾಗಿ ಇರುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಈಗ ಆರ್ ಸಿಬಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಆರ್ ಸಿಬಿ ವಿಜಯೋತ್ಸವದ ಬಗ್ಗೆ ಬಿಸಿಸಿಐಗೆ ಸರಿಯಾದ ಮಾಹಿತಿಯೇ ಇರಲಿಲ್ಲ ಎನ್ನಲಾಗಿದೆ. ಈ ಹಿಂದೆ ಐಪಿಎಲ್ ಗೆದ್ದ ತಂಡಗಳು ವಿಜಯೋತ್ಸವ ಆಚರಿಸುವಾಗ ಯಾವುದೇ ಅನಾಹುತವಾಗಿರಲಿಲ್ಲ. ಆದರೆ ಈಗ ಆರ್ ಸಿಬಿ ವಿಜಯೋತ್ಸವದಲ್ಲಿ ದುರಂತವಾಗಿರುವುದರಿಂದ ಒಂದು ವರ್ಷದ ಮಟ್ಟಿಗೆ ಆರ್ ಸಿಬಿಗೆ ನಿಷೇಧ ಹೇರಿ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ.