ಅಹಮಾದಾಬಾದ್: ಈ ಹಿಂದೆ ಹೇಳಿದ ಹಾಗೇ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ 20 ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಆಪರೇಷನ್ ಸಿಂಧೂರ ಕಾರ್ಯಚರಣೆ ವೇಳೆ ಸೇನಾಪಡೆಯ ಹೋರಾಟಕ್ಕೆ ವಿಶೇಷವಾದ ಗೌರವ ಸಲ್ಲಿಸಲಾಯಿತು.
ಗಾಯಕ ಶಂಕರ್ ಮಹಾದೇವನ್ ನೇತೃತ್ವದ ತಂಡವು ದೇಶಭಕ್ತಿಯ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ವಿಶೇಷವಾಗಿ ರಂಜನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಲಾವಿದರು ಹೆಜ್ಜೆಹಾಕುವ ಮೂಲಕ, ನೆರೆದಿದ್ದ ಜನಸ್ತೋಮಕ್ಕೆ ಖುಷಿ ನೀಡಿದ್ದಾರೆ.
ಹೆಲಿಕಾಫ್ಟರ್ ಮೂಲಕ ಕವಾಯತು ನಡೆಸಲಾಯಿತು.
ಇದೀಗ ಟಾಸ್ ಗೆದ್ದ ಪಂಜಾಬ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.