ಐಪಿಎಲ್: ಆರ್ ಸಿಬಿ ತಂಡ ಇನ್ನು ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯದಂತೆ!

ಮಂಗಳವಾರ, 8 ಮೇ 2018 (07:29 IST)
ಬೆಂಗಳೂರು: ಈ ಐಪಿಎಲ್ ಕೂಟದಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.

ನಿನ್ನೆ ಹೈದರಾಬಾದ್ ಸೈನ್ ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 146 ರನ್ ಗಳ ಸಣ್ಣ ಮೊತ್ತ ಬೆನ್ನಟ್ಟಲು ವಿಫಲವಾಗಿರುವ ಆರ್ ಸಿಬಿಗೆ 5 ರನ್ ಗಳ ಸೋಲಾಗಿದೆ. ನಾಯಕ ಕೊಹ್ಲಿ 39 ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ವಿಫಲರಾಗಿದ್ದಾರೆ.

ಇದರಿಂದ ಸಿಟ್ಟಿಗೆದ್ದಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಕ್ರಿಸ್ ಗೇಯ್ಲ್ ಇದ್ದಾಗ ಕನಿಷ್ಠ 2-3 ಪಂದ್ಯವಾದರೂ ಗೆಲ್ಲುತ್ತಿತ್ತು. ಈಗ ಅದೂ ಇಲ್ಲ ಎಂದು ಕೆಲವರು ಜರೆದರೆ ಇನ್ನು ಕೆಲವರು ಇದು ನಾಯಕ, ಕೋಚ್ ನ ಕಳಪೆ ಪ್ರದರ್ಶನ ತೋರಿಸುತ್ತದೆ ಎಂದಿದ್ದಾರೆ.

ಇನ್ನೊಬ್ಬ ಅಭಿಮಾನಿಯಂತೂ ಸಿಟ್ಟಿನ ಭರದಲ್ಲಿ ಆರ್ ಸಿಬಿಯ ಎಲ್ಲಾ ಆಟಗಾರರು ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹಿಡಿಶಾಪ ಹಾಕಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ