ರಜನಿಕಾಂತ್ ಕಬಾಲಿ ಜ್ವರವು ದೇಶಾದ್ಯಂತ ಅನೇಕ ಚಿತ್ರಪ್ರೇಮಿಗಳನ್ನು ಕಾಡುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ಗೆ ಆಡುತ್ತಿದ್ದ ಭಾರತದ ಕ್ರಿಕೆಟ್ ಆಟಗಾರರಾದ ರವಿಚಂದ್ರನ್ ಅಶ್ವಿನ್ ಮತ್ತು ಸುರೇಶ್ ರೈನಾ ಅವರನ್ನೂ ಕಬಾಲಿ ಕಾಡಿದೆ. ಅಶ್ವಿನ್ ಮತ್ತು ರೈನಾ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ಚಿತ್ರದ ಬಗ್ಗೆ ತಮ್ಮ ಪುಳಕವನ್ನು ಪ್ರಕಟಿಸಿದ್ದಾರೆ.
ಆಫ್ಸ್ಪಿನ್ನರ್ ಅಶ್ವಿನ್ ತಮಿಳುನಾಡು ಮೂಲದವರಾಗಿದ್ದು ರಜನಿಕಾಂತ್ ಫ್ಯಾನ್. ಇನ್ನೊಂದು ಚಿತ್ರದಿಂದ ದೃಶ್ಯವೊಂದನ್ನು ಟ್ವಿಟರ್ನಲ್ಲಿ ಅಶ್ವಿನ್ ಪೋಸ್ಟ್ ಮಾಡಿದ್ದು, ಆ ಚಿತ್ರದಲ್ಲಿ ಹೀರೊ ಕಬಡ್ಡಿ ಆಟಗಾರನಾಗಿದ್ದು, ದೊಡ್ಡ ಸ್ಪರ್ಧೆಯಿರುವ ದಿನದಂದೇ ಆಟದಲ್ಲಿ ಭಾಗವಹಿಸದೇ ಪೂಜಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾನೆ.
ವೆಸ್ಟ್ ಇಂಡೀಸ್ನಲ್ಲಿ ಪ್ರಥಮ ಟೆಸ್ಟ್ನಲ್ಲಿ ಅಶ್ವಿನ್ ಆಡುತ್ತಿರುವುದನ್ನು ಉಲ್ಲೇಖಿಸಿ ಈ ಪೋಸ್ಟ್ ಮಾಡಿದ್ದಾರೆ. ಅಶ್ವಿನ್ ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ, ಕೋಚ್ ಕುಂಬ್ಳೆ, ಮುರಳಿ ವಿಜಯ್, ಸ್ವತಃ ಅವರ ಹೆಸರು, ಲೋಕೇಶ್ ರಾಹುಲ್, ಶಿಖರ್ ಧವನ್ ಕೂಡ ಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಟ್ಯಾಗ್ ಮಾಡಿದ್ದಾರೆ.