ರಾಷ್ಟ್ರೀಯ ತಂಡದ ನೆರವಿಗೆ ಬರಲ್ಲ ಎಂದ ಕ್ರಿಕೆಟಿಗ ಮುರಳೀಧರನ್, ಜಯವರ್ಧನೆ

ಭಾನುವಾರ, 17 ಜೂನ್ 2018 (07:45 IST)
ಕೊಲೊಂಬೊ: ಶ್ರೀಲಂಕಾ ಕ್ರಿಕೆಟ್ ಪರಿಸ್ಥಿತಿ ಇದೀಗ ಪಾತಾಳಕ್ಕೆ ತಲುಪಿದೆ. ಒಂದೆಡೆ ಸಾಲು ಸಾಲು ಸೋಲುಗಳು, ಇನ್ನೊಂದೆಡೆ ರಾಜಕೀಯದಿಂದಾಗಿ ಲಂಕಾ ತಂಡ ದಯನೀಯ ಸ್ಥಿತಿಗೆ ತಲುಪಿದೆ.

ಆದರೆ ಲಂಕಾ ತಂಡದ ನೆರವಿಗೆ ಬರುವಂತೆ ಹಿರಿಯ ಕ್ರಿಕೆಟಿಗರಾದ ಮುತ್ತಯ್ಯ ಮುರಳೀಧರನ್ ಮತ್ತು ಜಯವರ್ಧನೆಗೆ ಕ್ರಿಕೆಟ್ ಮಂಡಳಿ ಮಾಡಿರುವ ಮನವಿಯನ್ನು ಅವರು ತಿರಸ್ಕರಿಸಿದ್ದಾರೆ.

ಪ್ರಸಕ್ತ ಶ್ರೀಲಂಕಾ ಕ್ರಿಕೆಟ್ ನ ವ್ಯವಸ್ಥೆ ನಮಗೆ ನಂಬಿಕೆಯಿಲ್ಲ. ಈ ಕಾರಣಕ್ಕೆ ರಾಷ್ಟ್ರೀಯ ತಂಡದ ಆಟಗಾರರ ನೆರವಿಗೆ ಬರಲ್ಲ ಎಂದು ಈ ಇಬ್ಬರೂ ಆಟಗಾರರು ಕಡ್ಡಿ ಮುರಿದಾಂಗೆ ಹೇಳಿದ್ದಾರಂತೆ. ಇಂತಹ ದಯನೀಯ ಸ್ಥಿತಿಯಲ್ಲಿರುವಾಗ ನಮ್ಮನ್ನು ಬಳಸುವುದು ದುರಾಲೋಚನೆಯ ಯೋಜನೆ ಎಂದು ಮುರಳೀಧರನ್ ಖಡಕ್ ಆಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ