ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ ರಾಹುಲ್ ದ್ರಾವಿಡ್

ಭಾನುವಾರ, 18 ಮಾರ್ಚ್ 2018 (09:54 IST)
ಬೆಂಗಳೂರು: ವಿಕ್ರಂ ಇನ್ ವೆಸ್ಟ್ ಮೆಂಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
 

ಹಲವಾರು ಖ್ಯಾತ ನಾಮರಿಗೆ ವಂಚನೆ ಮಾಡಿದ್ದ ವಿಕ್ರಂ ಇನ್ ವೆಸ್ಟ್ ಮೆಂಟ್ ಸಂಸ್ಥೆ ರಾಹುಲ್ ದ್ರಾವಿಡ್ ಗೂ ವಂಚನೆ ಮಾಡಿತ್ತು. ಹೀಗಾಗಿ ದ್ರಾವಿಡ್ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಸ್ಥೆಯಲ್ಲಿ ದ್ರಾವಿಡ್ 20 ಕೋಟಿ ರೂ. ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಈ ಪೈಕಿ 16 ಕೋಟಿ ರೂ ವಾಪಸ್ ಆಗಿದೆ. ಉಳಿದ ಹಣಕ್ಕೆ ವಂಚನೆಯಾಗಿದೆ ಎಂದು ದ್ರಾವಿಡ್ ದೂರಿನಲ್ಲಿ ಹೇಳಿದ್ದಾರೆ. ಸೈನಾ ನೆಹ್ವಾಲ್ ಸೇರಿದಂತೆ ಹಲವು ಖ್ಯಾತನಾಮರು ಈ ಸಂಸ್ಥೆಯಿಂದ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ