ಯಾಕಾದ್ರೂ ಇಂತಹ ಮೈದಾನದಲ್ಲಿ ಅಭ್ಯಾಸ ಪಂದ್ಯ ಮಾಡ್ತಾರೋ: ರಾಹುಲ್ ದ್ರಾವಿಡ್ ಗರಂ

Krishnaveni K

ಸೋಮವಾರ, 3 ಜೂನ್ 2024 (10:52 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವೆ ನಡೆದ ಅಭ್ಯಾಸ ಪಂದ್ಯದ ಮೈದಾನದ ಬಗ್ಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ  ಹೊಂದಿದ್ದಾರೆ.

ಮೊದಲ ಅಭ್ಯಾಸ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ 60 ರನ್ ಗಳಿಂದ ಗೆಲುವು ಕಂಡಿತ್ತು. ಆದರೆ ಈ ಪಂದ್ಯಕ್ಕೆ ನೀಡಲಾದ ಮೈದಾನದ ಪಿಚ್ ಬಗ್ಗೆ ದ್ರಾವಿಡ್ ಅಸಮಾಧಾನ ಹೊಂದಿದ್ದಾರೆ. ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣ ಮೈದಾನ ತುಂಬಾ ಜಾರುತ್ತಿತ್ತು. ಇದರಿಂದಾಗಿ ಆಟಗಾರರಿಗೆ ಗಾಯವಾಗುವ ಸಾಧ್ಯತೆಯಿತ್ತು. ಮಹತ್ವದ ಟೂರ್ನಮೆಂಟ್ ಸಂದರ್ಭದಲ್ಲಿ ಆಟಗಾರರು ಫಿಟ್ ಆಗಿರುವುದು ಮುಖ್ಯ. ಅಂತಹ ಸಂದರ್ಭದಲ್ಲಿ ಇಂತಹ ಮೈದಾನದಲ್ಲಿ ಆಡುವುದು ಅಪಾಯಕಾರಿ.

ಈ ಬಗ್ಗೆ ಮಾತನಾಡಿರುವ ದ್ರಾವಿಡ್ ‘ಮೈದಾನ ಜಾರುತ್ತಿತ್ತು. ಖಂಡಿತಾ ಆಟಗಾರರಿಗೆ ನಾಳೆ ಮಾಂಸಖಂಡ, ಸ್ನಾಯುಸೆಳೆತ ಸಮಸ್ಯೆ ಎದುರಿಸಬಹುದು. ಹೀಗಾಗಿ ನಾವು ಆಟಗಾರರ ಆರೋಗ್ಯದ ಬಗ್ಗೆ ನಾವು ಗಮನ ಹರಿಸಬೇಕಿದೆ. ಇಂತಹ ಸಂದರ್ಭದಲ್ಲಿಯೂ ನಮ್ಮ ಆಟಗಾರರು ಚೆನ್ನಾಗಿ ಪರಿಸ್ಥಿತಿ ನಿಭಾಯಿಸಿದರು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ