ಭಾರತ-ನೆದರ್ಲ್ಯಾಂಡ್ ಪಂದ್ಯಕ್ಕೆ ಮಳೆ ಭೀತಿ?

ಬುಧವಾರ, 26 ಅಕ್ಟೋಬರ್ 2022 (09:00 IST)
ಸಿಡ್ನಿ: ಟಿ20  ವಿಶ್ವಕಪ್ ನಲ್ಲಿ ಗುರುವಾರ ಎರಡನೇ ಪಂದ್ಯವಾಡಲಿರುವ ಟೀಂ ಇಂಡಿಯಾಗೆ ಈಗ ಸಂಕಷ್ಟ ಎದುರಾಗಿದೆ.

ಟೀಂ ಇಂಡಿಯಾ ನಿನ್ನೆ ಸಿಡ್ನಿಗೆ ಬಂದಿಳಿದಿತ್ತು. ಆಗಲೇ ಮಳೆಯೂ ಸುರಿಯಲಾರಂಭಿಸಿದೆ. ಹೀಗಾಗಿ ಸಿಡ್ನಿ ಮೈದಾನದಲ್ಲಿ ನಾಡಿದ್ದು ನಡೆಯಲಿರುವ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

ಕಳೆದ ಪಂದ್ಯಕ್ಕೂ ಮಳೆ ಭೀತಿಯಿತ್ತು. ಆದರೆ ಕೊನೆಯ ಕ್ಷಣದಲ್ಲಿ ವರುಣ ಕೃಪೆ ತೋರಿದ್ದ. ಈ ಪಂದ್ಯಕ್ಕೂ ಹಾಗಾಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ