ರಣಜಿ ಟ್ರೋಫಿ ಕ್ರಿಕೆಟ್: ಅಬ್ಬಬ್ಬಾ.. ಬಲಿಷ್ಠ ಮುಂಬೈ ಎದುರು ವಿನಯ್ ಕುಮಾರ್ ಅಬ್ಬರ!

ಗುರುವಾರ, 7 ಡಿಸೆಂಬರ್ 2017 (09:41 IST)
ನಾಗ್ಪುರ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂದಿನಿಂದ ಕರ್ನಾಟಕ ತಂಡ ಬಲಿಷ್ಠ ಮುಂಬೈ ಎದುರಿಸುತ್ತಿದ್ದು ಮೊದಲ ಅವಧಿಯಲ್ಲೇ ನಾಯಕ ವಿನಯ್ ಕುಮಾರ್ ಅಬ್ಬರಿಸಿದ್ದಾರೆ.
 

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ಕರ್ನಾಟಕ ಪರ ಆರಂಭದಲ್ಲಿಯೇ ನಾಯಕ ವಿನಯ್ ಕುಮಾರ್ ಮಾರಕ ಬೌಲಿಂಗ್ ನಡೆಸಿದ್ದಾರೆ. ಕೇವಲ 13 ರನ್ ಗಳಿಗೆ ಮುಂಬೈಯ ಮೂರು ವಿಕೆಟ್ ಕಿತ್ತಿದ್ದಾರೆ. ಈ ಮೂರೂ ವಿಕೆಟ್ ವಿನಯ್ ಕುಮಾರ್ ಪಾಲಾಗಿರುವುದು ವಿಶೇಷ.

ಅದರಲ್ಲೂ ವಿಶೇಷವಾಗಿ ಪ್ರತಿಭಾವಂತ ಪೃಥ್ವಿ ಶಾರನ್ನು ಕೇವಲ 2 ರನ್ ಗಳಿಗೇ ವಿನಯ್ ಪೆವಲಿಯನ್ ಕಳುಹಿಸಿರುವುದು ದೊಡ್ಡ ಪ್ಲಸ್ ಪಾಯಿಂಟ್. ಸದ್ಯಕ್ಕೆ ಅಖಿಲ್ ಹಿರ್ ವಾಡ್ಕರ್, ಸಿದ್ದೇಶ್ ಲಾಡ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ