ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕದ ದಾಳಿಗೆ ಮಹಾರಾಷ್ಟ್ರ ದೂಳೀಪಟ

ಗುರುವಾರ, 29 ನವೆಂಬರ್ 2018 (08:53 IST)
ಮೈಸೂರು: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಅತಿಥೇಯ ಕರ್ನಾಟಕ ಮಹಾರಾಷ್ಟ್ರದ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರವನ್ನು ಜುಜುಬಿ 113 ರನ್ ಗಳಿಗೆ ಆಲೌಟ್ ಮಾಡಿದ ಕರ್ನಾಟಕ ಆಟಗಾರರು ಬಳಿಕ ಮೊದಲ ದಿನದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದ್ದಾರೆ. ಈ ಮೂಲಕ ಇನ್ನು ಮೊದಲ ಇನಿಂಗ್ಸ್ ಮೊತ್ತ ಸರಿಗಟ್ಟಲು ಕೇವಲ 43 ರನ್ ಬಾಕಿ ಉಳಿಸಿದ್ದಾರೆ.

ಕರ್ನಾಟಕ ಪರ ವೇಗಿಗಳಾದ ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರೋಹಿತ್ ಮೋರೆ ತಲಾ 2 ವಿಕೆಟ್ ಕಬಳಿಸಿದರೆ ಜಗದೀಶ್ ಸುಚಿತ್ ನಾಲ್ಕು ವಿಕೆಟ್ ಉಡಾಯಿಸಿ ಎದುರಾಳಿಗಳ ಕುಸಿತಕ್ಕೆ ಕಾರಣರಾದರು. ಮಹಾರಾಷ್ಟ್ರ ಪರ ಋತುರಾಜ್ ಗಾಯಕ್ ವಾಡ್ 39, ರೋಹಿತ್ ಮೊಟ್ವಾನಿ 34, ಜಯ ಪಾಂಡೆ 20 ಮತ್ತು ಅನುಪಮ್ ಸಂಕೇಲ್ಚ 10 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಎರಡಂಕಿ ದಾಟಲಿಲ್ಲ.

ಕರ್ನಾಟಕ ಪರ ದಿನದಂತ್ಯಕ್ಕೆ 32 ರನ್ ಗಳಿಸಿರುವ ದೇಗಾ ನಿಶ್ಚಲ್ ಮತ್ತು 2 ರನ್ ಗಳಿಸಿ ಜಗದೀಶ್ ಸುಚಿತ್ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ