Virat Kohli: ಮಾರ್ಚ್ 17 ಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಂದ ಕೊಹ್ಲಿಗೆ ಸರ್ಪ್ರೈಸ್
ಮಾರ್ಚ್ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಕೆಆರ್ ನಡುವೆ ಐಪಿಎಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಆರ್ ಸಿಬಿ ಅಭಿಮಾನಿಗಳು ಕೊಹ್ಲಿಗಾಗಿ ಈ ಪಂದ್ಯಕ್ಕೆ ವಿಶೇಷ ದಿರಿಸಿನಲ್ಲಿ ಆಗಮಿಸಲಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ಆಕ್ರಮಣಕಾರೀ ಸ್ಪರ್ಶ ನೀಡಿದವರು. ಭಾರತ ಯಶಸ್ವೀ ಟೆಸ್ಟ್ ನಾಯಕ. ಹೀಗಾಗಿ ಈ ಮಾದರಿಯಿಂದ ನಿವೃತ್ತಿಯಾಗಿರುವ ಕೊಹ್ಲಿಗಾಗಿ ಅಭಿಮಾನಿಗಳು ಅಂದು ಬಿಳಿ ಬಣ್ಣದ ಟೆಸ್ಟ್ ಜೆರ್ಸಿಯಲ್ಲೇ ಮೈದಾನಕ್ಕೆ ಆಗಮಿಸಲಿದ್ದಾರೆ.
ಕೊಹ್ಲಿ ವಿದಾಯ ಪಂದ್ಯವನ್ನಂತೂ ಆಡಿಲ್ಲ. ಹೀಗಾಗಿ ಅಭಿಮಾನಿಗಳು ಅವರಿಗೆ ತಮ್ಮದೇ ರೀತಿಯಲ್ಲಿ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಹೀಗಾಗಿ ಮಾರ್ಚ್ 17 ರ ಪಂದ್ಯದ ವೇಳೆ ಆರ್ ಸಿಬಿ ಜೆರ್ಸಿಗಿಂತ ಬಿಳಿ ಜೆರ್ಸಿಯೇ ಹೆಚ್ಚು ಕಂಡರೂ ಅಚ್ಚರಿಯಿಲ್ಲ.