ಡೆಲ್ಲಿ ಮಾಲಿನ್ಯ ನಮಗೆ ಸಮಸ್ಯೆಯೇ ಅಲ್ಲ ಎಂದ ರೋಹಿತ್ ಶರ್ಮಾ

ಶನಿವಾರ, 2 ನವೆಂಬರ್ 2019 (07:28 IST)
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಾಳೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ಪಂದ್ಯದ ವೇಳೆ ವಾಯು ಮಾಲಿನ್ಯ ನಮಗೆ ಸಮಸ್ಯೆಯೇ ಆಗದು ಎಂದು ಹಂಗಾಮಿ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.


ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿರುವ ರೋಹಿತ್ ಶರ್ಮಾ ಇಲ್ಲಿ ವಾಯು ಮಾಲಿನ್ಯದಿಂದಾಗಿ ಪಂದ್ಯ ರದ್ದುಗೊಳಿಸಬೇಕೆಂದು ಕೆಲವರು ಒತ್ತಾಯ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ನಮಗೆ ಹಿಂದೆ ಇಲ್ಲಿ ಟೆಸ್ಟ್ ಪಂದ್ಯ ನಡೆದಾಗಲೂ ಸಮಸ್ಯೆಯಾಗಿರಲಿಲ್ಲ. ಹೀಗಾಗಿ ಇಂದೂ ಸಮಸ್ಯೆಯಾಗಬಹುದು ಎಂದು ಅನಿಸುತ್ತಿಲ್ಲ. ನವಂಬರ್ 3 ರಂದು ಖಂಡಿತವಾಗಿಯೂ ಪಂದ್ಯ ನಡೆಯಲಿದೆ’ ಎಂದು ರೋಹಿತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ