ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಇನ್ನೂ ಇದೆ ಅವಕಾಶ: ರೋಹಿತ್ ಶರ್ಮಾ

ಮಂಗಳವಾರ, 22 ಆಗಸ್ಟ್ 2023 (09:30 IST)
ಮುಂಬೈ: ಏಷ್ಯಾ ಕಪ್ ಕ್ರಿಕೆಟ್ 2023 ಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಈ ತಂಡವೇ ಏಕದಿನ ವಿಶ್ವಕಪ್‍ ಗೂ ಆಯ್ಕೆಯಾಗಲಿದೆ ಎನ್ನಲಾಗಿತ್ತು. ಆದರೆ ರೋಹಿತ್ ಶರ್ಮಾ ಅಲ್ಲಗಳೆದಿದ್ದಾರೆ.

ಕೆಲವು ಪ್ರಮುಖ ಆಟಗಾರರಾದ ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಾಹಲ್ ಮುಂತಾದವರನ್ನು ಏಷ್ಯಾ ಕಪ್ ತಂಡದಿಂದ ಕೈ ಬಿಡಲಾಗಿದೆ. ಆದರೆ ಈ ಆಟಗಾರರಿಗೆ ಏಕದಿನ ವಿಶ್ವಕಪ್ ತಂಡದಲ್ಲೂ ಅವಕಾಶ ಸಿಗಲ್ಲ ಎಂದು ಹೇಳಲಾಗದು ಎಂದಿದ್ದಾರೆ ರೋಹಿತ್ ಶರ್ಮಾ.

ಏಷ್ಯಾ ಕಪ್ ನಲ್ಲಿ ಸ್ಥಾನ ಸಿಗದ ಆಟಗಾರರಿಗೆ ಏಕದಿನ ವಿಶ್ವಕಪ್ ನಲ್ಲೂ ಅವಕಾಶ ಸಿಗಲ್ಲ ಎನ್ನುವ ನಿರಾಸೆ ಬೇಡ ಎಂದು ರೋಹಿತ್ ಶರ್ಮಾ ಭರವಸೆ ತುಂಬಿದ್ದಾರೆ. ‘ಹೀಗಾಗಿ ಏಕದಿನ ವಿಶ್ವಕಪ್ ನಲ್ಲಿ ಯಾರಿಗೂ ಅವಕಾಶದ ಬಾಗಿಲು ಮುಚ್ಚಿಲ್ಲ. ಯಾರು ಬೇಕಾದರೂ ತಂಡಕ್ಕೆ ಮರಳಬಹುದು. ಚಹಲ್ ಸಾಕಷ್ಟು ವೈಟ್ ಬಾಲ್ ಕ್ರಿಕೆಟ್ ಆಡಿದ್ದಾರೆ. ನಮಗೆ ವಿಶ್ವಕಪ್ ಗೆ ಅವರು ಬೇಕು ಎನಿಸಿದರೆ ಆಯ್ಕೆ ಮಾಡುತ್ತೇವೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ