ಭಾರತ ತಂಡಕ್ಕೆ ಧವನ್-ದ್ರಾವಿಡ್ ಸಾರಥ್ಯ ವಹಿಸುವುದು ಇದೇ ಮೊದಲಲ್ಲ!

ಸೋಮವಾರ, 28 ಜೂನ್ 2021 (10:26 IST)
ಮುಂಬೈ: ಶ್ರೀಲಂಕಾದಲ್ಲಿ ನಡೆಯಲಿರುವ ಸೀಮಿತ ಓವರ್ ಗಳ ಸರಣಿಗೆ ವಿಮಾನವೇರುವ ಮುನ್ನ ನಾಯಕ ಶಿಖರ್ ಧವನ್ ಮಾಧ‍್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ.


ಈ ಸರಣಿಗೆ ಟೀಂ ಇಂಡಿಯಾ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಜೊತೆ ಈ ಹಿಂದೆ ಕೆಲಸ ಮಾಡಿದ ಅನುಭವವನ್ನು ಧವನ್ ಹಂಚಿಕೊಂಡಿದ್ದಾರೆ.ದ್ರಾವಿಡ್ ಕೋಚ್ ಆಗಿ ತಾವು ನಾಯಕರಾಗಿ ಹಿಂದೊಮ್ಮೆ ಎ ತಂಡದ ಪರ ಆಡಿದ ಅನುಭವವಿದೆ.

ಹೀಗಾಗಿ ನನಗೆ ರಾಹುಲ್ ಭಯ್ಯಾ ಹೇಗೆ ಎಂಬುದು ಚೆನ್ನಾಗಿ ಗೊತ್ತು. ಎಲ್ಲರ ಅಭಿಪ್ರಾಯಗಳನ್ನು ಪಡೆದು, ಸೌಹಾರ್ದಯುತ ವಾತಾವರಣ ಸೃಷ್ಟಿಸಿ ಆಡುವುದೇ ನಮ್ಮ ಗುರಿ ಎಂದಿದ್ದಾರೆ ಧವನ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ