ವಿರಾಟ್ ಕೊಹ್ಲಿಗೆ ಹೊಸ ತಲೆನೋವು ತಂದಿಟ್ಟ ಸೌರವ್ ಗಂಗೂಲಿ

ಬುಧವಾರ, 4 ಡಿಸೆಂಬರ್ 2019 (09:05 IST)
ಮುಂಬೈ: ಮೊದಲ ಬಾರಿಗೆ ಕೋಲ್ಕೊತ್ತಾದಲ್ಲಿ ಹಗಲು ರಾತ್ರಿ ಟೆಸ್ಟ್ ಪಂದ್ಯವಾಡಲು ಮನಸ್ಸಿಲ್ಲದಿದ್ದರೂ ಬಿಸಿಸಿಐ ಅಧ್ಯಕ್ಷ ಗಂಗೂಲಿ ಒತ್ತಾಯಕ್ಕೆ ಮಣಿದು ಟೀಂ ಇಂಡಿಯಾ ಆಟಗಾರರು ಒಲ್ಲದ ಮನಸ್ಸಿನಿಂದಲೇ ಆಡಿದ್ದರು. ಆದರೆ ಇದೀಗ ಗಂಗೂಲಿ ಹೊಸ ತಲೆನೋವು ತಂದಿಟ್ಟಿದ್ದಾರೆ.


ಪಿಂಕ್ ಬಾಲ್ ಟೆಸ್ಟ್ ಆಡಲು ಹಲವು ಕ್ರಿಕೆಟಿಗರಿಗೆ ಇಷ್ಟವಿರಲಿಲ್ಲ ಎಂಬ ಮಾತಿದೆ. ಹಾಗಿದ್ದರೂ ವಿಶ್ವದ ಎಲ್ಲಾ ಕ್ರಿಕೆಟ್ ತಂಡಗಳೂ ಆಡಿರುವಾಗ ತಾವೇಕೆ ಹಿಂದೆ ಬೀಳಬೇಕೆಂದು ಇದೂ ಒಂದು ಪ್ರಯೋಗ ಆಗಿ ಬಿಡಲಿ ಎಂದು ವಿರಾಟ್ ಪಡೆ ಬಾಂಗ್ಲಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಆಡಿತ್ತು.

ಆದರೆ ಆ ಪಂದ್ಯಕ್ಕೆ ಸಿಕ್ಕ ಯಶಸ್ಸಿನಿಂದ ಉಬ್ಬಿಹೋಗಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪ್ರತೀ ಸರಣಿಯಲ್ಲೂ ಒಂದು ಪಂದ್ಯವನ್ನು ಹಗಲು ರಾತ್ರಿ ಆಡುವಂತೆ ಟೀಂ ಇಂಡಿಯಾಕ್ಕೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ದೇಶದ ಇತರ ಮೈದಾನಗಳಲ್ಲೂ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆಯೋಜಿಸಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ. ಇದೀಗ ಕೊಹ್ಲಿ ಪಡೆಗೆ ಬಿಸಿ ತುಪ್ಪವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ