ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರು ಟೆಸ್ಟ್ ನಲ್ಲಿ ಟೀಂ ಇಂಡಿಯಾಗೆ ಕಾದಿದೆ ಒಂದು ಅಪಾಯ!

ಮಂಗಳವಾರ, 29 ಮೇ 2018 (08:35 IST)
ಬೆಂಗಳೂರು: ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಆಡುತ್ತಿದೆ. ಹಾಗಂತ ಈ ಒಂದು ತಪ್ಪು ಮಾಡಿದರೆ ಅಪಾಯ ಖಂಡಿತಾ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಎಚ್ಚರಿಸಿದ್ದಾರೆ.

ಅಫ್ಘಾನಿಸ್ತಾನದ ಪ್ರತಿಭಾವಂತ ಲೆಗ್ ಸ್ಪಿನ್ನರ್ ರಶೀದ್ ಖಾನ್ ಐಪಿಎಲ್ ನಲ್ಲಿ ಗಳಿಸಿದ ಯಶಸ್ಸು ನೋಡಿದ ಮೇಲೆ ಗಂಗೂಲಿ ಕ್ಯುರೇಟರ್ ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಯಾವತ್ತಿನ ಹಾಗೆ ಈ ಪಂದ್ಯಕ್ಕೆ ಕ್ಯುರೇಟರ್ ಗಳು ಟರ್ನಿಂಗ್ ಪಿಚ್ ನಿರ್ಮಿಸಿದರೆ ಅದು ಭಾರತಕ್ಕೇ ಮುಳುವಾಗಬಹುದು. ರಶೀದ್ ಇಂತಹ ಪಿಚ್ ನಲ್ಲಿ ರುದ್ರ ನರ್ತನ ಮಾಡಬಹುದು ಎಂದು ಗಂಗೂಲಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ