ಒಂದಲ್ಲಾ ಒಂದು ದಿನ ಗಂಗೂಲಿ ಪಶ್ಚಿಮ ಬಂಗಾಲದ ಸಿಎಂ ಆಗ್ತಾರಂತೆ!

ಗುರುವಾರ, 3 ಮೇ 2018 (08:58 IST)
ಕೋಲ್ಕೊತ್ತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಟೀಂ ಮ್ಯಾನೇಜ್ ಮೆಂಟ್ ವಿಚಾರದಲ್ಲಿ ಸರಿಯಾದ ವ್ಯಕ್ತಿ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಗಂಗೂಲಿ ಒಂದು ದಿನ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗುತ್ತಾರಂತೆ!

ಹಾಗಂತ ಹೇಳಿದ್ದು, ಗಂಗೂಲಿಯ ಮೆಚ್ಚಿನ ಶಿಷ್ಯ ವೀರೇಂದ್ರ ಸೆಹ್ವಾಗ್‍. ಗಂಗೂಲಿ ಆತ್ಮಕತೆಯ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸೆಹ್ವಾಗ್‍ ಈ ಹೇಳಿಕೆ ನೀಡಿದ್ದಾರೆ.

‘ದಾದ ಒಂದು ದಿನ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗುವುದು ಖಚಿತ. ಆದರೆ ಅದಕ್ಕಿಂತ ಮೊದಲು ಬಿಸಿಸಿಐ ಅಧ್ಯಕ್ಷರಾಗುತ್ತಾರೆ’ ಎಂದು ತಮ್ಮ ನಾಯಕನ ಗುಣಗಾನ ಮಾಡಿದ್ದಾರೆ ಸೆಹ್ವಾಗ್.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ