‘ನೀನೂ ಶರ್ಟ್ ಬಿಚ್ಚು’ ವಿವಿಎಸ್ ಲಕ್ಷ್ಮಣ್ ಗೆ ಲಾರ್ಡ್ಸ್ ನಲ್ಲಿ ಗಂಗೂಲಿ ಹೀಗೆಂದು ಅದೇಶಿಸಿದ್ದರಂತೆ!

ಶನಿವಾರ, 28 ಜುಲೈ 2018 (09:43 IST)
ಕೋಲ್ಕೊತ್ತಾ: ಲಾರ್ಡ್ಸ್ ನಲ್ಲಿ ನ್ಯಾಟ್ ವೆಸ್ಟ್ ಸರಣಿ ಫೈನಲ್ ಗೆದ್ದ ಬಳಿಕ  ಅಂದಿನ ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿದ ಘಟನೆ ಇಂದಿಗೂ ಕ್ರಿಕೆಟ್ ಪ್ರಿಯರ ಮನದಲ್ಲಿ ಅಚ್ಚಳಿಯದೆ ನಿಂತಿದೆ.

ಆವತ್ತಿನ ಘಟನೆ ಬಗ್ಗೆ ಗಂಗೂಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳು ನೀನು ಯಾಕೆ ಹಾಗೆ ಮಾಡಿದೆ ಅಪ್ಪಾ? ಅದು ಅಗತ್ಯವಿತ್ತಾ ಎಂದು ಕೇಳಿದಾಗ ಮುಜುಗರಕ್ಕೊಳಗಾಗಿದ್ದ ಗಂಗೂಲಿ ಅದು ನಾನು ಮಾಡಿದ ತಪ್ಪು ಎಂದು ಹೇಳಿದ್ದರಂತೆ!

‘ಆವತ್ತು ಆಗಿದ ಘಟನೆ ತಕ್ಷಣ ನನ್ನ ಮನಸ್ಸಿಗೆ ಬಂದಿದ್ದು. ಫೈನಲ್ ಗೆದ್ದಾಗ ನನಗೆ ಫ್ಲಿಂಟಾಫ್ ಅದಕ್ಕಿಂತ ಮೊದಲು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಮ್ಮ ವಿರುದ್ಧ ಸರಣಿ ಸಮಬಲ ಮಾಡಿದ ಖುಷಿಗೆ ಶರ್ಟ್ ಬಿಚ್ಚಿದ್ದು ನೆನಪಾಯಿತು. ಅದಕ್ಕೇ ನಾನು ತಡ ಮಾಡದೇ ಅವತ್ತು ಶರ್ಟ್ ಬಿಚ್ಚಿದೆ.

ಶರ್ಟ್ ಬಿಚ್ಚುವಾಗ ನನ್ನ ಎಡ ಪಕ್ಕದಲ್ಲಿ ವಿವಿಎಸ್ ಲಕ್ಷ್ಮಣ್ ಇದ್ದರು. ಅವರು ಬೇಡ, ಹಾಗೆ ಮಾಡಬೇಡ ಎಂದು ಹೇಳುತ್ತಲೇ ಇದ್ದರು. ಆದರೆ ನಾನು ಕೇಳಲಿಲ್ಲ. ನಾನು ಶರ್ಟ್ ಬಿಚ್ಚಿದಾಗ ನಾನೇನು ಮಾಡಲಿ ಎಂದು ಲಕ್ಷ್ಮಣ್ ಕೇಳಿದರು. ನೀನೂ ಶರ್ಟ್ ಬಿಚ್ಚು ಎಂದು ಹೇಳಿದ್ದೆ’ ಎಂದು ಗಂಗೂಲಿ ಅಂದಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ